ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಪ್ರಕರಣ ಸಂಬಂಧ ಪಾಲಿಕೆಯ ಕ್ವಾಲಿಟಿ ಕಂಟ್ರೋಲ್ ರೂಂನಲ್ಲಿ ಘಟನೆ ಸಂಭವಿಸಿದೆ. ಎಂದಿನಂತೆ ಮೀಟಿಂಗ್ ನಡೆಸುವಾಗ ಅವಘಡ ಸಂಭವಿಸಿದೆ. ಕೆಳಗಡೆ ಕಿಮಿಕಲ್ ಲ್ಯಾಬ್ನಲ್ಲಿ ಟೆಸ್ಟಿಂಗ್ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಬ್ಬರು ಅಪರೇಟರ್ಸ್ ಕೆಳಗೆ ಬಂದಿದ್ದಾರೆ.
ಕಟ್ಟಡದಿಂದ ಹೊರಗೆ ಬರುವಾಗ ಬೆಂಕಿ ತಗುಲಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕೆಲವರಿಗೆ ಶೇ.25ರಷ್ಟು, ಮತ್ತೆ ಕೆಲವರಿಗೆ 35-40ರಷ್ಟು ಗಾಯಗಳಾಗಿವೆ. 48 ಗಂಟೆ ಅಬ್ಸರ್ವೇಷನ್ನಲ್ಲಿ ಇಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದರು.