ಹುಬ್ಬಳ್ಳಿ: ಅಬಕಾರಿ ಇಲಾಖೆಯಲ್ಲಿ ಹೊಸ ಹೊಸ ಕಾನೂನುಗಳಿಗೆ ತಿದ್ದುಪಡಿ ತರುವ ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು. ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಇಲಾಖೆಯಲ್ಲಿ ಸಾಕಷ್ಟು ಬದಲಾಣೆ ಆಗಬೇಕಿದ್ದುಈಗಿರುವ ಐದು ವರ್ಷಗಳ ಕಾಲದ ಪ್ರತಿ ವರ್ಷದ ಅವಧಿಯ ಲೈಸನ್ಸ್ ನವೀಕರಣವನ್ನ ಐದು ವರ್ಷಗಳ ಕಾಲ ವಿಸ್ತರಣೆ ಹಳೆ ಲೈಸನ್ಸ್ ಗಳಿಗಳನ್ನ ನವೀಕರಣ ಮಾಡಲು ಅವಕಾಶ ಕೊಡುವುದು ಇದರ ಜೊತೆಗೆ ಕಾರಣಾಂತರಗಳಿಂದ ರದ್ದಾದ ಹಳೇ ಲೈಸನ್ಸ್ ದಾರರು ಬಾಕಿ ಹಣ ತುಂಬಿದರೆ ಲೈಸನ್ಸ್ ರಿನಿವಲ್ ಮಾಡುವುದು ಯಾರು ಹಣ ತುಂಬಿದರೇ ಪರವಾನಿಗೆ ಕೊಡಲಾಗುವುದು ಎಂದ ಅವರು
ಜನರ ಬೇಡಿಕೆ ಮತ್ತು ಸಪ್ಲಾಯ್ ಆಧಾರದ ಮೇಲೆ ಕೊಡಲಾಗುವುದು ಹೊರ ರಾಜ್ಯದಿಂದ ಯಾವುದೇ ರೀತಿಯ ಮದ್ಯ ಆಮುದು ಆಗದಂತೆ ನೋಡಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೋ ಈಗ ಹೊಸ ಲೈಸನ್ಸ್ ಕೊಡಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಭಾರತೀಯ ಜನತಾ ಪಕ್ಷದವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡತಾ ಇದ್ದಾರೆ ಈ ಕುರಿತು ಕೇಲವರು ಇಲಾಖೆಯ ಬಗ್ಗೆ ಇಲ್ಲ ಸಲ್ಲದ ಗುಲ್ಲು ಎಬ್ಬಸತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯ ಮಂತ್ರಿ ಆಗತಾರೆ ಎಂಬ ಶಾಸಕ ಉದಯ ಸೇರಿದಂತೆ ಕೇಲವರ ಹೇಳಿಕೆ ವಿಚಾರವಾಗಿ ಮಾತನಾಡಿ, ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗತ್ತಾರೆ ಎಂದು ಮದ್ದೂರು ಶಾಸಕ ಉದಯ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ನಮ್ಮಲ್ಲಿಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನ ಕಾಂಗ್ರೆಸ್ ವರ್ಕಿಂಗ್ ಪಾರ್ಟಿ ಹಾಗೂ ಹಿರಿಯ ನಾಯಕರು ನೋಡಿಕೊಳ್ಳತ್ತಾರೆಈ ಕುರಿತು ನಾನು ಹೆಚ್ಚಿಗೆ ಏನು ಹೇಳಲಾರೆ ಎಂದರು. ಇನ್ನ ಬರ ,ಕಾವೇರಿ, ಅಭಿವೃದ್ಧಿ ಕಾಮಗಾರಿ ಮರೆಮಾಚಲು ಹುಲಿ ಉಗುರು ವಿವಾದ ಮುನ್ನೇಲೆ ತರಲಾಗಿದೆ ಎಂಬ ಆರೋಪ ಹಿನ್ನೆಲೆ ಕುರಿತು ಸಹ ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟಿದ್ದು ನಾವು ಯಾವುದೇ ವಿವಾದ ಮಾಡತಾ ಇಲ್ಲ ಎಂದರು