ಬೆಂಗಳೂರು;- ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ರಾಜಾಜಿನಗರ ಪೊಲೀಸರನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.ಹೆಚ್ ಸಿ ಆಂಜನೇಯ , ಪಿಎಸ್ ಐ ಮಾರುತಿ, ಇನ್ಸ್ಪೆಕ್ಟರ್ , ಲಕ್ಷಣ್ ಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಈ ಹಿನ್ನೆಲೆ ಲೋಕಾಯುಕ್ತ ಪೊಲೀಸ್ರು ರಾಜಾಜಿನಗರ ಪೊಕೀಸ್ರ ಮೇಲೆ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ರಾಜಾಜಿ ನಗರ ಠಾಣೆಯ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಐದು ಸಾವಿರ ಲಂಚದ ಹಣ ಪಡೆಯುವಾಗ ಪ್ರಕರಣದ ಎ೧ ಆರೋಪಿ ಹೆಚ್ ಸಿ ಆಂಜನೇಯ ಲೋಕಾ ಬಲೆಗೆ ಬಿದ್ದಿದ್ದಾರೆ.ಪ್ರಕರಣದಲ್ಲಿ ಪಿಎಸ್ ಐ ಮಾರುತಿ,ಎ2 ಪಿಐ ಲಕ್ಷ್ಮಣ್ ಗೌಡ ಎ3 ಆರೋಪಿಯಾಗಿದ್ದು ಲೋಕಾಯುಕ್ತ ಪೊಲೀಸ್ರ ದಾಳಿ ವೇಳೆ ಎಸ್ಕೇಪ್ ಆಗಿದ್ದಾರೆ. ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಹಕಾಲು 50 ಸಾವಿರ ಹಣಕ್ಕೆ ಪಿಸಿ ಆಂಜನೇಯ ಡಿಮಾಂಡ್ ಮಾಡಿದ್ರಂತೆ. ಈ ಪ್ರಕರಣದಲ್ಲಿ ಐದು ಸಾವಿರ ಹಣ ಪಡೆಯುವಗಾ ಲೋಕಾಯಕ್ತ ಪೊಲೀಸ್ರು ದಾಳಿ ನಡೆಸಿ ಲಾಕ್ ಮಾಡಿದ್ದಾರೆ.