ಬೆಂಗಳೂರು: ಸರ್ಕಾರದ ಮೇಲೆ ಜವಾಬ್ದಾರಿ ಇದೆ. ನಿಮ್ಮ ಪರವಾಗಿ ಇರ್ತೀವಿ ಅಂತ ಗುತ್ತಿಗೆದಾರರಿಗೆ ನಾವು ಹೇಳುವುದಿಲ್ಲ. ಯಾರನ್ನೂ ನಾವು ಎತ್ತಿ ಕಟ್ಟುವ ಕೆಲಸ ಮಾಡುವುದಿಲ್ಲ. ನಮ್ಮ ಸರ್ಕಾರದಲ್ಲಿ ಇಂತ ವ್ಯಕ್ತಿ ಅಂತ ಎಲ್ಲೂ ಹೇಳಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಹಣಕ್ಕೆ ಡಿಮ್ಯಾಂಡ್ ಇಟ್ಟಿರೋದನ್ನು ಗುತ್ತಿಗೆದಾರರು ನೇರವಾಗಿ ಆಪಾದನೆ ಮಾಡುತ್ತಿದ್ದಾರೆ. ನಮ್ಮ ಮೇಲೆ ಮಾಡಿದ್ದ 40% ಆರೋಪವನ್ನೂ ತನಿಖೆಗೆ ಕೊಡಲಿ. ಇವರ ಕಾಲದಲ್ಲಿ ಆಗುತ್ತಿರುವ ಇರುವ ಆರೋಪಗಳಿಗೂ ತನಿಖೆಗೆ ಮುಂದಾಗಲಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.