ಸೂರ್ಯೋದಯ: 06.03 AM, ಸೂರ್ಯಾಸ್ತ : 06.49 PM
ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
ಅದಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ವರ್ಷ ಋತು,
ತಿಥಿ: ಇವತ್ತು ಪಂಚಮಿ 11:44 AM ತನಕ ನಂತರ ಷಷ್ಠಿ
ನಕ್ಷತ್ರ: ಇವತ್ತು ಉತ್ತರ ಫಾಲ್ಗುಣಿ 07:47 PM ತನಕ ನಂತರ ಹಸ್ತ
ಯೋಗ: ಇವತ್ತು ಪರಿಘ 02:17 PM ತನಕ ನಂತರ ಶಿವ
ಕರಣ: ಇವತ್ತು ಬಾಲವ 11:44 AM ತನಕ ನಂತರ ಕೌಲವ
ರಾಹು ಕಾಲ: 04:30 ನಿಂದ 06:00 ವರೆಗೂ
ಯಮಗಂಡ: 12:00 ನಿಂದ 01:30 ವರೆಗೂ
ಗುಳಿಕ ಕಾಲ: 03:00 ನಿಂದ 04:30 ವರೆಗೆ
ಅಮೃತಕಾಲ: 11.44 AM to 01.32 PM
ಅಭಿಜಿತ್ ಮುಹುರ್ತ: ಬೆಳಗ್ಗೆ.11:56 ನಿಂದ ಮ.12:48 ವರೆಗೂ
ಮೇಷ ರಾಶಿ: ಉದ್ಯೋಗ ಸಮಸ್ಯೆಯಿಂದ ಕೋರ್ಟ್ ಮೆಟ್ಟಲೆರುವ ಸಂಭವ, ಉದ್ಯೋಗ ಸ್ಥಳಕ್ಕೆ ಸಾಲಗಾರರ ಕಾಟ,ಮಕ್ಕಳು ವಿರೋಧಿಯಾಗಲು ನಿಮ್ಮ ಸ್ವಭಾವವೇ ಕಾರಣ, ಪ್ರೇಮಿಗಳಿಬ್ಬರು ಮನಸ್ತಾಪವಾಗಲು ನೀವೇ ಕಾರಣಕರ್ತರು,ಎಲೆಕ್ಟ್ರಾನಿಕ್ ಉಪಕರಣಗಳ ವ್ಯಾಪಾರಸ್ಥರಿಗೆ ಧನಲಾಭ,ಅನಾವಶ್ಯಕವಾಗಿ ವ್ಯವಹಾರಗಳಲ್ಲಿ ಕೈ ಹಾಕಬಾರದು.
ಗೆಳತಿಯೊಬ್ಬಳ ಸಹವಾಸದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಹೊಸ ಯೋಜನೆ ನಿರೂಪಣೆ.ಮಾತೃ ವರ್ಗದವರಿಂದ ಸಹಾಯ. ಸದ್ಯದಲ್ಲಿರುವ ಕೆಲಸವನ್ನು ಬಿಡುವುದು ಸೂಕ್ತವಲ್ಲ.
ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ಪಾಪ ಪ್ರಜ್ಙೆ ಕಾಡಿಸುತ್ತಿದೆ, ಮನಸ್ಸು ಬದಲಾಯಿಸಿಕೊಳ್ಳುವುದರಿಂದ ಲಾಭವಿದೆ.
ಸದಾ ಸಾವಿನ ಬಗ್ಗೆ ಯೋಚನೆ ಮಾಡುವುದನ್ನು ಬಿಡಿ, ನಿಮ್ಮಲ್ಲಿರುವ ಶಕ್ತಿಗೆ ಅನುಗುಣವಾದದನ್ನು ನಿತ್ಯವೂ ಮಾಡಿ.
ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್ ಚಾತುರ್ಯದಿಂದ ನಿಮ್ಮ ಸಹಪಾಠಿಗಳನ್ನು ಗೆಲ್ಲುವಿರಿ. ದುಷ್ಟ ಫಲ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ: ರಾಜಕಾರಣಿಗಳಿಂದ ಮತ್ತು ಅಧಿಕಾರಿ ವರ್ಗದಿಂದ ಶುಭದಾಯಕ, ಕೃಷಿ ಭೂಮಿಯಲ್ಲಿ ಹೆಚ್ಚಿನ ಇಳುವರಿ, ವ್ಯಾಪಾರದಲ್ಲಿ ಅಧಿಕ ಲಾಭ,ದುಡಿದು ಮನೆಗೆ ಬಂದ ನಿಮ್ಮ ಯಜಮಾನನಿಗೆ ಹಾರೈಸುವುದು ನಿಮ್ಮ ಕರ್ತವ್ಯ,ಹಣಕಾಸಿನ ವಿಚಾರದಲ್ಲಿ ಕಿರಿಕಿರಿ.
ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ನೌಕರಿಯಲ್ಲಿ ಅಕಾಲಿಕ ತಪಾಸಣೆಯಿಂದ ಕಿರಿಕಿರಿ. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ದಾಂಪತ್ಯದಲ್ಲಿ ಸೌಹಾರ್ದತೆ ಸಂತಸ ಮೂಡುವುದು.
ಮಿಥುನ: ನ್ಯಾಯಾಲಯದಲ್ಲಿ ಜಯದ ಸೂಚನೆ, ಈ ಸಮಸ್ಯೆಗಳು ಇತ್ಯರ್ಥ,ಗಂಡ ಹೆಂಡತಿ ಮಧ್ಯೆ ಸದಾ ಕಲಹ ಸೃಷ್ಟಿಯಾಗಲು ನೀವೇ ಕಾರಣಕರ್ತರು,ಸಾಮಾಜಿಕ ಕ್ಷೇತ್ರದ ಕಾರ್ಯಕರ್ತರಿಗೆ ಸಂತಸ ತರುವ ದಿನ.ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ಶತ್ರು ಬಾಧೆಯಿಂದ ಉಲ್ಬಣ ಸಾಧ್ಯತೆ. ಕೆಲವು ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಕುಲದೇವತಾ ಸ್ಮರಣೆ ಮಾಡಿರಿ. ಗುರು, ಹಿರಿಯರ ಆಶೀರ್ವಾದ ಪಡೆಯಿರಿ. ಶುಭಕಾರ್ಯ ಯಶಸ್ಸು ಸಂತಸ. ತೃಪ್ತಿ ದಾಯಕ ಕುಟುಂಬ ಜೀವನ. ಅವಸರದ ನಿರ್ಧಾರಗಳು ಸೂಕ್ತವಲ್ಲ.
ಕರ್ಕಾಟಕ: ಸಹೋದರ ಮತ್ತು ಸಹೋದರಿಯರಿಂದ ಅನುಕೂಲ, ಉದ್ಯೋಗ ಸ್ಥಳ ಬದಲಾವಣೆ ಸಾಧ್ಯತೆ,ನಿಮ್ಮ ದುಡುಕಿನ ನಿರ್ಧಾರದಿಂದ ಷೇರು ಮಾರುಕಟ್ಟೆ ಹಣ ಹೂಡಿಕೆಯಿಂದ ನಷ್ಟ ಅನುಭವಿಸುವಿರಿ,
ದೂರದ ಪ್ರಯಾಣ ಬೇಡ.
ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಂಗಾತಿಯಿಂದ ದೂರ ಇರುವುದು ಒಳ್ಳೆಯದಲ್ಲ. ಸಂಗಾತಿಯ ಸಹಕಾರದಿಂದ ಸಂಸಾರಿಕ ನೆಮ್ಮದಿ. ನೀವು ಆಡುವ ಮಾತುಗಳನ್ನು ಇನ್ನೊಬ್ಬರೂ ಅಷ್ಟೇ ಗಹನವಾಗಿ ಚಿಂತಿಸುತ್ತಾರೆ ಎಂಬುದನ್ನು ತಿಳಿಯಿರಿ. ವಿವಾಹ ಆಕಾಂಕ್ಷಿಗಳಿಗೆ ವಿವಾಹ ಸಂಬಂಧಗಳು ಕೂಡಿಬರಲಿದೆ. ದೇವತಾ ದರ್ಶನದಿಂದ ಮನಸ್ಸಿಗೆ ಸಂತಸ.
ಸಿಂಹ: ಮನೆ ಬದಲಾಯಿಸುವ ಚಿಂತನೆ, ದುಡುಕು ಮಾತಿನಿಂದ ಕುಟುಂಬಸ್ಥರಿಗೆ ನೋವು,
ನೀವು ಉದ್ಯೋಗ ಕಳೆದುಕೊಳ್ಳಲು ನಿಮ್ಮ ದುರ್ಬುದ್ಧಿ ಹಾಗೂ ಅಲಸ್ಯ ಕಾರಣ,ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿಯಾಗಲಿದೆ. ವ್ಯಾಪಾರದಲ್ಲಿ ಲಾಭ. ವೃತ್ತಿಯಲ್ಲಿ ಸಮಸ್ಯೆಗಳು ಉದ್ಭವ.
ತಾಯಿಯ ಸುಖ ಮತ್ತು ವಾಹನ ಸುಖ ದೊರೆಯುವುದಾದರೂ ಸಂಗಾತಿಯ ಅಸಹಕಾರ ನಿಮ್ಮ ಮನೋಚಿಂತನೆಯನ್ನು ಹೆಚ್ಚಿಸುವುದು. ಸಮಾಜದಲ್ಲಿ ಗೌರವ. ಕೃಷಿ ಕ್ಷೇತ್ರದಲ್ಲಿ ಲಾಭ. ಮನೋನಿಯಾಮಕ ರುದ್ರ ದೇವರನ್ನು ಭಜಿಸಿ, ಒಳಿತಾಗುವುದು.
ಕನ್ಯಾ: ಸ್ವಂತ ಉದ್ಯಮದಲ್ಲಿ ಧನಾಗಮನ, ಅಭಿವೃದ್ಧಿ ಆಗಬೇಕು ಅನ್ನುವ ಹಂಬಲ,
ಸಾಲದ ಸಮಸ್ಯೆ ಎದುರಿಸಲು ನೀವೇ ಕಾರಣರು,ಸರ್ಕಾರಿ ನೌಕರಿ ಪ್ರಯತ್ನ ಮಾಡುವವರು ಪೂರ್ವ ಸಿದ್ಧತೆ ಮಾಡಿಕೊಳ್ಳಿ.
ಹಣಕಾಸಿನ ತೊಂದರೆ ಇರುವುದಿಲ್ಲ. ಉದ್ಯೋಗನಿಮಿತ್ತ ಪ್ರಯಾಣ ಯೋಗ. ಆರೋಗ್ಯ ಲಾಭ. ಬಾಳಸಂಗಾತಿಯೊಡನೆ ಚರ್ಚಿಸಿ ಸಲಹೆ ಪಡೆಯಲು ಸಕಾಲವಾಗಿದೆ. ನೀವಾಡುವ ಮಾತು ಇತರರಿಗೆ ರುಚಿಸುವುದಿಲ್ಲ. ಆರೋಗ್ಯದ ಸಲುವಾಗಿ ಗಣಪತಿಯನ್ನು ಪ್ರಾರ್ಥಿಸಿ.
ತುಲಾ: ವ್ಯಾಪಾರದ ನಷ್ಟದಿಂದ ನಿದ್ರಾಭಂಗ ಸಾಲದ ಒತ್ತಡ, ಸರ್ಕಾರಿ ಅಧಿಕಾರಿಗಳಿಗೆ ಸಂಕಷ್ಟ, ಉದ್ಯೋಗದಲ್ಲಿ ಸಮಸ್ಯೆ ವೃದ್ಧಿ,
ಆಸ್ತಿ ಪಾಸ್ತಿ ಕಳೆದುಕೊಳ್ಳಲು ನಿಮ್ಮ ದುಡಿಕಿನ ನಿರ್ಧಾರವೇ ಕಾರಣ,
ಕೆಲಸ ಕಾರ್ಯ ಮಾಡುವಾಗ ಆತಂಕಗಳು ಎದುರಾಗುವ ಸಾಧ್ಯತೆ.
ನಿಮ್ಮ ಸಮೀಪದ ಜನ ಅಥವಾ ಬಂಧುಗಳೇ ನಿಮ್ಮ ಕಾರ್ಯವೈಖರಿಯನ್ನು ಟೀಕಿಸುವರು. ಶುಭ ಸಮಾರಂಭಗಳಲ್ಲಿ ಅಪಮಾನ. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ, ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು. ನಿಮ್ಮ ಬಗ್ಗೆ ದೂರು ಹೇಳಿದರೆ ನಕ್ಕು ಸುಮ್ಮನಾಗಿ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ.ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ದೂರದ ಪ್ರಯಾಣ ಬೇಡ.
ವೃಶ್ಚಿಕ ರಾಶಿ: ಆರೋಗ್ಯ ಸಮಸ್ಯೆ ಕಾಡಲಿದೆ, ಮೇಲಾಧಿಕಾರಿಗಳಿಂದ ಕೆಳಗಿನವರಿಗೆ ತೊಂದರೆ, ಸಂಗಾತಿಯಿಂದ ಉತ್ತಮ ಬಾಂಧವ್ಯ,ಗಂಡ ಹೆಂಡತಿ ಮಧ್ಯೆ ಸದಾ ಕಿರಿಕಿರಿಯಾಗಲು ನೀವೇ ಕಾರಣರು,
ನಿಮ್ಮ ಕೆಲಸದ ಮೇಲೆ ಗಮನ ಹರಿಸಿ ಮತ್ತು ಭಾವನಾತ್ಮಕ ವ್ಯಾಜ್ಯಗಳಿಂದ ದೂರವಿರಿ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ.
ಇಂದು, ನೀವು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ಸಂಜೆಯನ್ನು ಕಳೆಯುತ್ತೀರಿ.
ಆರೋಗ್ಯದಲ್ಲಿ ಉತ್ತಮ.
ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಯಾವುದಾದರೂ ಸಾಮಾಜಿಕ ಸಭೆಗೆ ಹಾಜರಾಗಿ. ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು. ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ಕುಟುಂಬದಲ್ಲಿ ತೊಂದರೆಯುಂಟಾಗಬಹುದು.
ಧನು: ಸೇವಾ ವೃತ್ತಿ ಮುಂದುವರಿಕೆ, ಹೋಟೆಲ್ ನವರಿಗೆ ಲಾಭದ ಪ್ರಮಾಣ ಕುಂಠಿತ,ಸ್ತ್ರೀಯರು ಶತ್ರುಗಳಾಗುವರು, ಉದ್ಯೋಗದಲ್ಲಿ ಮಾನಸಿಕ ಒತ್ತಡ,
ಮಕ್ಕಳು ವಿರೋಧಿಯಾಗಲು ನಿಮ್ಮ ಸ್ವಭಾವವೇ ಕಾರಣ,ನೆರೆ ಹೊರೆಯವರಿಂದ ವಿನಾಕಾರಣ ಮನಸ್ತಾಪ.ವ್ಯಾಪಾರ, ವ್ಯವಹಾರ ಎಂದರೆ ಲಾಭ ನಷ್ಟ ಇದ್ದದ್ದೇ. ಎಲ್ಲಾ ಕಾಲದಲ್ಲೂ ಲಾಭವೇ ಆಗುತ್ತದೆ ಎಂದು ತಿಳಿಯಬಾರದು. ಉದ್ಯೋಗಕಾಂಕ್ಷಿಗಳಿಗೆ ಕೆಲಸದ ಅವಕಾಶಗಳು ದೊರಕಲಿವೆ. ಮುಷ್ಟಿ ಕಾಳು ಚೆಲ್ಲಿ ಮೂಟೆ ಕಾಳನ್ನು ಪಡೆಯುವಂತೆ ನಿಮ್ಮ ಹಣ ಖರ್ಚಾಗುವುದು. ಆದರೂ ಮುಂದೆ ಒಳಿತಾಗುವುದು. ಉದ್ಯೋಗದಲ್ಲಿರುವವರಿಗೆ ಸ್ಥಳ ಬದಲಾವಣೆ. ಇಷ್ಟದೇವತಾ ದರ್ಶನ ಭಾಗ್ಯ.
ಮಕರ: ಉದ್ಯೋಗ ಸಮಸ್ಯೆಯಿಂದ ಕೋರ್ಟ್ ಮೆಟ್ಟಿಲೇರುವ ಸಂಭವ, ಕೆಲಸ ಮಾಡುವ ಜಾಗಕ್ಕೆ ಬಂದು ಸಾಲಗಾರ ಕಿರಿಕಿರಿ, ಹಣಕಾಸಿನ ವಿಚಾರಕ್ಕಾಗಿ ಮತ್ತು ಆಸ್ತಿ ವಿಚಾರಕ್ಕಾಗಿ ಕುಟುಂಬದಲ್ಲಿ ಮಾನಸಿಕ ಕಿರಿಕಿರಿ,
ವ್ಯಾಪಾರದಲ್ಲಿ ನಷ್ಟ ಅನುಭವಿಸಲು ನಿಮ್ಮ ದುಡುಕಿನ ನಿರ್ಧಾರವೇ ಕಾರಣ,ಮನೆಗೆ ವಿಶೇಷ ವ್ಯಕ್ತಿ ಭೇಟಿ ಸಂಭವ. ಧಾರ್ಮಿಕ ಕಾರ್ಯದಲ್ಲಿ ಭಾಗಿ.ಮಾತು ಬಲ್ಲವನಿಗೆ ಜಗಳವಿಲ್ಲ ಎಂದರು ಹಿರಿಯರು. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡುವುದು. ಈ ಬಗ್ಗೆ ಜಾಗ್ರತೆ ಇರಲಿ. ಆರೋಗ್ಯದ ಕಡೆ ಗಮನ ಇರಲಿ. ಮಕ್ಕಳ ಶ್ರೇಯೋಭಿವೃದ್ಧಿ ಇಂದಾಗಿ ಮಾನಸಿಕ ತೃಪ್ತಿ. ಮನೆಯಲ್ಲಿ ಸಂತೋಷದ ವಾತಾವರಣ.
ಕುಂಭ: ಸ್ತ್ರೀ- ಪುರುಷರಿಂದ ಮೋಸ ಸಂಭವ, ಸಂತಾನದ ಚಿಂತೆ ಕಾಡಲಿದೆ, ರಾಜಕಾರಣಿಗಳಿಂದ ಮತ್ತು ಅಧಿಕಾರಿ ವರ್ಗದಿಂದ ಶುಭದಾಯಕ,ಪ್ರೇಮಿಗಳಲ್ಲಿ ವಿರಸಕ್ಕೆ ನೀವೇ ಕಾರಣಆರ್ಥಿಕ ತೊಂದರೆಯಿಂದ ಮುಕ್ತರಾಗುವಿರಿ.ನಿಮ್ಮ ಬುದ್ಧಿ ಬಲದಿಂದ ಪದೋನ್ನತಿ ಸಿಗುವುದು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಓದು ಮುಂದುವರಿಕೆಯ ಬಗ್ಗೆ ಚಿಂತನೆ ನಡೆಸುವಿರಿ. ಉದ್ಯೋಗದಲ್ಲಿ ಪ್ರಗತಿ .ಸಹಜವಾಗಿಯೇ ಕೆಲವರು ವಿರೋಧಿಸುವ ಜನ ಇರುತ್ತಾರೆ. ಅವರ ಟೀಕೆಗಳಿಗೆ ಕಿವಿಗೊಡದಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ಮೀನ: ನಿಮಗಿಂತ ಸೇವಾ ಅವಧಿ ಕಡಿಮೆ ಹೊಂದಿದವರಿಗೆ ಪ್ರಮೋಷನ್ ಭಾಗ್ಯ, ಆದರೆ ನಿಮಗೆ ಪ್ರಮೋಷನ್ ಇಲ್ಲ ಎನ್ನುವ ಚಿಂತೆ ಕಾಡಲಿದೆ, ಸ್ವಂತ ಉದ್ಯಮದಲ್ಲಿ ಧನ ಆಗಮನ, ಶೃಂಗಾರ ವಸ್ತುಗಳ ಮಾರಾಟಗಾರರು, ಬಟ್ಟೆ ವಿನ್ಯಾಸಗಾರರು, ಮನೆ ಡಿಸೈನರ್ನವರಿಗೆ ಧನ ಲಾಭ ಪಡೆಯಲಿದ್ದೀರಿ,ನಿಮ್ಮ ಕುಟುಂಬದಲ್ಲಿ ಕಲಹಗಳು ನೀವೇ ಕಾರಣಕರ್ತರು,ಹಣದ ಕೊರತೆಯಿಂದಾಗಿ ಕೆಲಸ ಕಾರ್ಯ ಸ್ಥಗಿತ.ಮಹಿಳೆಯರ ಮನೋಭಿಲಾಷೆಗಳು ಈಡೇರಲಿದೆ.
ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವ ಸಾಧ್ಯತೆ.
ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು.