ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಕೊಡುವಾಗಲೇ ಎಚ್ಚರಿಕೆ ನೀಡಿದ್ದೆವು, ಎಲ್ಲಾ ಗ್ಯಾರಂಟಿಗಳಿಗೆ ಹಣ ಎಲ್ಲಿಂದ ತರುತ್ತೀರಾ ಎಂದು ಪ್ರಶ್ನಿಸಿದ್ದೆವು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಕಾಂಗ್ರೆಸ್ ಸರ್ಕಾರ ಮೊದಲು ತಮ್ಮ ಗ್ಯಾರಂಟಿ ಕೊಡಲಿ, ಈಗ ಅಕ್ಕಿ ಕೊಡಲು ಕೇಂದ್ರದ ಹೆಸರೇಳುತ್ತಿದ್ದಾರೆ. ಜನರಿಗೆ 5 ಕೆಜಿ ಉಚಿತ ಅಕ್ಕಿ ಕೊಡ್ತಿರೋದು ಪ್ರಧಾನಿ ಮೋದಿ ಎಂದರು.