ಕೋಲಾರ: ಕರ್ನಾಟಕದ ಜನರು ಕಾಂಗ್ರೆಸ್ನ ಕೆಟ್ಟ ಸರ್ಕಾರ ತೆಗೆಯಬೇಕಿದೆ. ಜಾಹೀರಾತು ಕೊಡೋಕೆ ಬಜೆಟ್ನಲ್ಲಿ 200 ಕೋಟಿ ಅನುದಾನ ಪಡೆಯುತ್ತಾರೆ. ರೈತರು ನಷ್ಟದಲ್ಲಿದ್ದಾರೆ, ಪರಿಹಾರ ಕೊಡೋಕೆ ಹಣ ಇಲ್ಲ. ಜಾಹೀರಾತು ಕೊಡೋಕೆ 200 ಕೋಟಿ ಹಣ ಪಾಸ್ ಮಾಡ್ತಾರೆ. ಜಾಹೀರಾತಿನಲ್ಲಿ ಇರುವ ಕಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತೆ. ಸರ್ಕಾರ ಯಾರಪ್ಪನ ದುಡ್ಡಲ್ಲಿ ಜಾಹೀರಾತು ಕೊಡ್ತಿದ್ದಾರೆ ಎಂದು ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ರು.
ಕೋಲಾರ ನಗರದಲ್ಲಿ ನಡೆಯುತ್ತಿರುವ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಅವರ ಸಿರಿಸಮೃದ್ದಿ ಗೋಲ್ಡ್ ಪ್ಯಾಲೇಸ್ ಎರಡನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಹೆಸರು ಸಹ ಕೇಳಿ ಬರ್ತಿದೆ. ಈ ಬಾರಿ ಕೋಲಾರ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಸೀಟ್ ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಬೇಕು.
ಸಂಸದ ಮುನಿಸ್ವಾಮಿ ಸಹ ನಿರೀಕ್ಷೆ ಇಟ್ಟಿದ್ದಾರೆ, ಅಂತಿಮವಾಗಿ ಪಟ್ಟಿ ಬರಲಿದೆ. ಮುನಿಸ್ವಾಮಿ ಸಹ ಸಮರ್ಥರಿದ್ದಾರೆ ಎಂದರು ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಹೋಗ್ತಾ ಇರ್ತಾರೆ, ಬರ್ತಾರೆ ತಲೆ ಏಕೆ ಕೆಡಿಸಿಕೊಳ್ಳಬೇಕು. ಡಿಕೆಶಿಗೆ ಹಣ ಹಾಗೂ ಧಮ್ಕಿ ನಲ್ಲಿ ಪೈಪೋಟಿ ಕೊಡೋಕೆ ಆಗುತ್ತಾ? ಯಾರಾದ್ರೂ ಶಾಸಕರು ಆ ರೀತಿ ಹೇಳಿದ್ದಾರ? ಸೆಟಲ್ಮೆಂಟ್ ರಾಜಕಾರಣದಲ್ಲಿ ಪೈಪೋಟಿ ಕೊಡೋಕೆ ನಮ್ಮಿಂದ ಆಗಲ್ಲ. ಗಿಫ್ಟ್ ಹಂಚೋರು ಎಲ್ಲಾ ಬಿಟ್ಟಿದ್ದಾರೆ ಅದರ ಬಗ್ಗೆ ಮಾತಾಡಲ್ಲ. ಚೈನಾದಿಂದ ಖರೀದಿ ಮಾಡಿರುವ ಕುಕ್ಕರ್ ಹಾಗೂ ಡೈನಿಂಗ್ ಸೆಟ್ ಹಂಚುತ್ತಿದ್ದಾರೆ.