ಕಾರಲ್ಲಿ ಕುಳಿತಿದ್ದಾಗಲೇ RSS ಮುಖಂಡ ಹೃದಯಾಘಾತದಿಂದ ಸಾವು..!

ಬಾಗಲಕೋಟೆ: ಕಾರಲ್ಲೇ ಕುಳಿತಾಗ ಹೃದಯಾಘಾತ ಸಂಭವಿಸಿ ಜಿಲ್ಲಾ ಆರ್ ಎಸ್.ಎಸ್ ಮುಖಂಡರೋರ್ವರು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಲೋಕಾಪುರ ಪಟ್ಟಣದಲ್ಲಿ ನಡೆದಿದೆ. ೪೫ ವರ್ಷದ ಸಿದ್ದು ಚಿಕ್ಕದಾನಿ ಎಂಬುವರೇ ಹೃದಯಾಘಾತ ಸಂಭಿಸಿ, ಕಾರಲೇ ಪ್ರಾಣಬಿಟ್ಟ ವ್ಯಕ್ತಿ. ಮೃತ ಸಿದ್ದು ಅವ್ರು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ನಿವಾಸಿಯಾಗಿದ್ದು,

ನಿನ್ನೆ ರಾತ್ರಿ ಕಾರಿಗೆ ಡೀಸಲ್ ಹಾಕಿಸಿಕೊಂಡು, ಪೆಟ್ರೋಲ್ ಬಂಕ್ ನಿಂದ ಹೊರಡಲು ಕಾರು ಸ್ಟಾರ್ಟ್ ಮಾಡಿದ್ದರು. ಸ್ಟಾರ್ಟ್ ಆದ ಕಾರ್ ಪೆಟ್ರೋಲ್ ಬಂಕ್ ಆವರಣದಲ್ಲೇ ಇರುವಾಗಲೇ ಸಿದ್ದು ಅವರಿಗೆ ಹೃದಯಾಘಾತ ವಾಗಿದೆ, ಇಡೀ ರಾತ್ರಿ ಪೆಟ್ರೋಲ್ ಬಂಕ್ ಅವರಣದಲ್ಲೇ ಕಾರು ಇದ್ದದ್ದನ್ನ ಬೆಳಿಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಗಮನಿಸಿ, ಕಾರು ಬಾಗಿಲು ತೆರೆದು ನೋಡಿದಾಗ ಸಿದ್ದು ಚಿಕ್ಕದಾನಿ ಅವ್ರು ಸಾವನ್ನಪ್ಪಿರುವದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Loading

Leave a Reply

Your email address will not be published. Required fields are marked *