ಒಂದು ಕೋಟಿ ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಅಂತರರಾಜ್ಯ ಅಡಿಕೆ ವ್ಯಾಪಾರಿಯ ಒಂದು ಕೋಟಿ ರೂಪಾಯಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸಂತೋಷ್ ಸೇರಿದಂತೆ ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 7 ರಂದು ಹೆಚ್​​.ಎಸ್​. ಉಮೇಶ್ ಅಡಿಕೆ ವ್ಯಾಪಾರ ಸಲುವಾಗಿ ನೀಲಿ ಬಣ್ಣದ ಬ್ಯಾಗಿನಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿಯನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಚಿತ್ರದುರ್ಗದಲ್ಲಿ ಅಡಿಕೆ ಕೊಂಡುಕೊಳ್ಳಲು ಬರುತ್ತಾರೆ.

ಆದರೆ ಉಮೇಶ್​​ ಅವರಿಗೆ ಅಲ್ಲಿ ಅಡಿಕೆ ಸಿಗುವುದಿಲ್ಲ. ನಂತರ ಶಿರಾದಲ್ಲಿ ಅಡಿಕೆ ಕೊಂಡುಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಸಾಧ್ಯವಾಗುವುದಿಲ್ಲ. ಕೊನೆಗೆ ತುಮಕೂರಿನಲ್ಲಾದರೂ ಸಿಗಬಹುದಾ ಎಂದು ಬಂದರೇ ಇಲ್ಲಿಯೂ ಕೂಡ ಉಮೇಶ್​ ಅವರಿಗೆ ಅಡಿಕೆ ಸಿಗುವುದಿಲ್ಲ.

ಬಳಿಕ ಬೆಂಗಳೂರಿನ ಚಂದ್ರಾಲೇಔಟ್​ನಲ್ಲಿರುವ ಪಿಜಿಯೊಂದರಲ್ಲಿರುವ ತಮ್ಮ ಮತ್ತು ತಮ್ಮ ಸ್ನೇಹಿತರ ಮಕ್ಕಳನ್ನು ಭೇಟಿಯಾಗಿ ಹೋಗೋಣ ಎಂದು ರಾಜಧಾನಿಗೆ ಬರುತ್ತಾರೆ. ಹೀಗೆ ಬಂದವರು ನೇರವಾಗಿ ಗಾಂಧೀ‌ನಗರಕ್ಕೆ ಬರುತ್ತಾರೆ. ಗಾಂಧಿನಗರದ ಹೊಟೇಲ್​​ವೊಂದರ​ ಮುಂಭಾಗದಲ್ಲಿ ಕಾರು ನಿಲ್ಲಿಸಿ, ಊಟ ಮಾಡುತ್ತಾರೆ.

ಆ ಬಳಿಕ ಚಂದ್ರಾಲೇಔಟ್​​ನಲ್ಲಿ ಮಕ್ಕಳನ್ನು ಭೇಟಿಯಾಗಿ ಚಿತ್ರದುರ್ಗಕ್ಕೆ ವಾಪಸ್​ ಹೊರಡುತ್ತಿರುತ್ತಾರೆ. ದಾರಿ ಮಧ್ಯೆ ದಾಬಸ್ ಪೇಟೆಯಲ್ಲಿ ಟೀ ಕುಡಿದು, ಚಿತ್ರದುರ್ಗದಕ್ಕೆ ತೆರಳುತ್ತಾರೆ. ತಮ್ಮೂರಾದ ಭೀಮಸಮುದ್ರಕ್ಕೆ ರಾತ್ರಿ 7:45ಕ್ಕೆ ತಲುಪುತ್ತಾರೆ. ಆಗ ಕಾರಿನ ಡಿಕ್ಕಿ ತೆಗೆದು ನೋಡಿದಾಗ ಹಣ ಮಾಯವಾಗಿರುತ್ತೆ.

ನಂತರ ಉಮೇಶ್​ ವಾರ, 10 ದಿವಸ ಬಿಟ್ಟು ಕಾರು ಡ್ರೈವರ್​​ ಮೇಲೆ ಸಂಶಯ ವ್ಯಕ್ತಪಡಿಸಿ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಕಾರ್​ ಡ್ರೈವರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಡುತ್ತಾನೆ. ಪೊಲೀಸರಿಂದ ತನಿಖೆ ಮುಂದುವರೆದಿದೆ.

 

Loading

Leave a Reply

Your email address will not be published. Required fields are marked *