ಮೈಸೂರು: ಕಾವೇರಿ ನದಿ ನೋಡಲು ಹೋದ ಬಾಲಕಿ ಸಾವು.!

ಮೈಸೂರು: ಕಾವೇರಿ ನದಿ ನೋಡಲು ಹೋದ ಬಾಲಕಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದ ಬಳಿ ನಡೆದಿದೆ. ಸ್ಪೂರ್ತಿ (೧೩) ಮೃತ ವಿದ್ಯಾರ್ಥಿನಿಯಾಗಿದ್ದು, ಗಂಧನಹಳ್ಳಿ ಗ್ರಾಮದ ಲೋಕೇಶ್ ಎಂಬುವರ ಪುತ್ರಿ ಆಗಿದ್ದಾಳೆ. ವಾರದ ರಜೆ ಹಿನ್ನೆಲೆ ತಂದೆ ತಾಯಿ ಜತೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ಊಟದ ಬಳಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ಬಾಲಕಿಯ ಶವಕ್ಕಾಗಿ ಅಗ್ನಿಶಮಕ ದಳದಿಂದ ಶೋಧ ಕಾರ್ಯ ನಡೆಯುತ್ತಿದ್ದು, ಇನ್ನೂ ಈ ಘಟನೆ ಸಂಭಂಧ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading

Leave a Reply

Your email address will not be published. Required fields are marked *