ಸೋಮವಾರ ಬೆಳಗ್ಗೆ 6 ಗಂಟೆ ವೇಳೆ ಜೋಡೆತ್ತು ಜೊತೆ ಫೋಟೋ ಹಾಕಿದ್ದ ದರ್ಶನ್ ರಾತ್ರಿಯಾಗುತ್ತಿದ್ದಂತೆ ‘ಖುಷಿಯಾಗಿರೋಕೆ ಒಂಟಿಯಾಗಿರೋದೇ ಲೇಸು’ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಜೋಡೆತ್ತು ಸೀಕ್ರೆಟ್ ನಟ ಸುದೀಪ್ ಜೊತೆ ಕೈ ಜೋಡಿಸೋದಲ್ಲ ಎನ್ನುವ ಅರ್ಥದಲ್ಲಿ ದರ್ಶನ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ‘ನನ್ನ ಸೆಲೆಬ್ರಿಟೀಸ್ (ಅಭಿಮಾನಿಗಳು) ಜೊತೆಗಿರೋದೇ ನನಗೆ ಖುಷಿ’ ಎಂದು ದರ್ಶನ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ನಟಿ, ಸಂಸದೆ ಸುಮಲತಾ ಬರ್ತ್ಡೇ ಪಾರ್ಟಿಯಲ್ಲಿ ನಟ ದರ್ಶನ್ ಹಾಗೂ ಸುದೀಪ್ ಇಬ್ಬರೂ ದೂರ ದೂರ ನಿಂತಿದ್ದರಾದರೂ ಒಂದೇ ವೇದಿಕೆ ಮೇಲೆ ಕಂಡು ಬಂದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಂದು ನಟ ದರ್ಶನ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಜೋಡೆತ್ತುಗಳ ಜೊತೆಯಲ್ಲಿ ನಿಂತಿರುವ ಫೋಟೋ ಹಂಚಿಕೊಂಡು ‘ಕಾಲಾಯ ತಸ್ಮಯ್ ನಮಃ..’ ಎಂದು ಬರೆದುಕೊಂಡಿದ್ದರು.
ಇನ್ನೂ, ಸೆಪ್ಟೆಂಬರ್ 2 ರಂದು ನಟ ಸುದೀಪ್ ಹುಟ್ಟುಹಬ್ಬ. ಅಂದು ಡಿ ಬಾಸ್ ತನ್ನ ಕುಚಿಕು ಗೆಳೆಯ ಸುದೀಪ್ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡುತ್ತಾರಾ? ಈ ಮೂಲಕ ಇಬ್ಬರೂ ಮತ್ತೆ ಒಂದಾಗುತ್ತಾರಾ? ಅಂತ ಕಾದುನೋಡಬೇಕಿದೆ.