ಬೆಳಗ್ಗೆ ಜೋಡೆತ್ತಿನ ಪೋಸ್ಟ್: ರಾತ್ರಿ ಏಕಾಂಗಿ ಮೆಸೇಜ್-ಪರೋಕ್ಷವಾಗಿಯೇ ಎಲ್ಲ ಹೇಳಿದ್ರಾ ದರ್ಶನ್

ಸೋಮವಾರ ಬೆಳಗ್ಗೆ 6 ಗಂಟೆ ವೇಳೆ ಜೋಡೆತ್ತು ಜೊತೆ ಫೋಟೋ ಹಾಕಿದ್ದ ದರ್ಶನ್‌ ರಾತ್ರಿಯಾಗುತ್ತಿದ್ದಂತೆ ‘ಖುಷಿಯಾಗಿರೋಕೆ ಒಂಟಿಯಾಗಿರೋದೇ ಲೇಸು’ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

 

 

ಜೋಡೆತ್ತು ಸೀಕ್ರೆಟ್ ನಟ ಸುದೀಪ್ ಜೊತೆ ಕೈ ಜೋಡಿಸೋದಲ್ಲ ಎನ್ನುವ ಅರ್ಥದಲ್ಲಿ ದರ್ಶನ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ‘ನನ್ನ ಸೆಲೆಬ್ರಿಟೀಸ್ (ಅಭಿಮಾನಿಗಳು) ಜೊತೆಗಿರೋದೇ ನನಗೆ ಖುಷಿ’ ಎಂದು ದರ್ಶನ್ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

 

 

ನಟಿ, ಸಂಸದೆ ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ನಟ ದರ್ಶನ್ ಹಾಗೂ ಸುದೀಪ್ ಇಬ್ಬರೂ ದೂರ ದೂರ ನಿಂತಿದ್ದರಾದರೂ ಒಂದೇ ವೇದಿಕೆ ಮೇಲೆ ಕಂಡು ಬಂದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇಂದು ನಟ ದರ್ಶನ್‌, ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಜೋಡೆತ್ತುಗಳ ಜೊತೆಯಲ್ಲಿ ನಿಂತಿರುವ ಫೋಟೋ ಹಂಚಿಕೊಂಡು ‘ಕಾಲಾಯ ತಸ್ಮಯ್ ನಮಃ..’ ಎಂದು ಬರೆದುಕೊಂಡಿದ್ದರು.

ಇನ್ನೂ, ಸೆಪ್ಟೆಂಬರ್‌ 2 ರಂದು ನಟ ಸುದೀಪ್ ಹುಟ್ಟುಹಬ್ಬ. ಅಂದು ಡಿ ಬಾಸ್ ತನ್ನ ಕುಚಿಕು ಗೆಳೆಯ ಸುದೀಪ್‌ ಅವರಿಗೆ ಹುಟ್ಟುಹಬ್ಬದ ವಿಶ್‌ ಮಾಡುತ್ತಾರಾ? ಈ ಮೂಲಕ ಇಬ್ಬರೂ ಮತ್ತೆ ಒಂದಾಗುತ್ತಾರಾ? ಅಂತ ಕಾದುನೋಡಬೇಕಿದೆ.

Loading

Leave a Reply

Your email address will not be published. Required fields are marked *