ಮೆಜೆಸ್ಟಿಕ್: ದೀಪಾವಳಿ ಹಬ್ಬಕ್ಕೆ ತೆರಳಲು ಮೆಜೆಸ್ಟಿಕ್ ನತ್ತ ಪ್ರಯಾಣಿಕರ ದಂಡು

ಬೆಂಗಳೂರು:- ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಊರಿಗೆ ತೆರಳಲು ಪ್ರಯಾಣಿಕರು ಮುಂದಾಗಿದ್ದಾರೆ. ಇಂದೂ ಸಹ ಮೆಜೆಸ್ಟಿಕ್ ಕಡೆ ಪ್ರಯಾಣಿಕರ ದಂಡು ಅಗಮಿಸಿದೆ. ರಾತ್ರಿ ಬಸ್ ಸಿಗದವರು ಸೀಟ್ ರಿಸರ್ವ್ ಮಾಡದವರು, ಬೆಳಗ್ಗೆ ತಮ್ಮೂರಿಗೆ ಕಡೆ ಪ್ರಯಾಣ ಮಾಡಲು ಆಗಮಿಸಿದ್ದಾರೆ. ಬೆಳಗ್ಗೆಯಿಂದ ನೂರಕ್ಕೂ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗಿದೆ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ KSRTC ಹೆಚ್ಚುವರಿ ಬಸ್ ಬಿಡುತ್ತಿದೆ. ಬಳ್ಳಾರಿ, ಹುಬ್ಬಳ್ಳಿ, ದಾವಣಗೆರೆ, ಗುಲಬರ್ಗಾ, ಶಿವಮೊಗ್ಗ ಕಡೆ ಬಸ್ ವ್ಯವಸ್ಥೆ ಮಾಡಲಾಗಿದೆ.

Loading

Leave a Reply

Your email address will not be published. Required fields are marked *