ಬಿಜೆಪಿ ಧಿಕ್ಕರಿಸಿ ರಾಜ್ಯದ ಜನರು ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ ಎಂದು ಶಿವಮೊಗ್ಗದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಹೇಳಿದರು. ಕುಮಾರಸ್ವಾಮಿ ನಡವಳಿಕೆ ಸರಿಯಿಲ್ಲ ಅಂತ ಅಲ್ಲಿಂದ ಹೊರಬಂದಿದ್ದೇವೆ. ಪ್ರತಿ ಚುನಾವಣೆಯಲ್ಲಿ ಕನಿಷ್ಠ 10 ಜನ ಜೆಡಿಎಸ್ನಿಂದ ಹೊರ ಬರ್ತಿದ್ದಾರೆ. ಜೆಡಿಎಸ್ ಈ ಸ್ಥಿತಿಗೆ ಬರಲು ಅವರ ಕುಟುಂಬವೇ ಕಾರಣ, ನಾವಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಬರಲ್ಲ, ತಮ್ಮದೇ ಆಡಳಿತ ಅಂದುಕೊಂಡಿದ್ದರು ಎಂದರು.