ಮೈಸೂರು: ದಸರಾ ಜಂಬೂ ಸವಾರಿ ಹಿನ್ನೆಲೆ ಇಂದು ಗಜಪಡೆಗಳಿಂದ ಜಂಬೂ ಸವಾರಿ ರಿಹರ್ಸಲ್ ನಡೆಯಿತು. ರಿಹರ್ಸಲ್ನಲ್ಲಿ ಗಜಪಡೆ, ಅಶ್ವಾರೋಹಿದಳ, ಪೊಲೀಸ್ ಬ್ಯಾಂಡ್, ಪೊಲೀಸ್ ತುಕ್ಕಡಿಗಳು ಭಾಗಿಯಾಗಿವೆ. ಗಜಪಡೆ ಪುಷ್ಪಾರ್ಚನೆ ಸೇರಿದಂತೆ ಎಲ್ಲಾ ಬಗೆಯ ತಾಲೀಮು ನಡೆಯಿತು. ಅಭಿಮನ್ಯಗೆ ಡಿಸಿಎಫ್ ಸೌರಭ್ ಕುಮಾರ್, ಮೌಂಟೆಡ್ ಎಸ್ಪಿ ಶೈಲೇಂದ್ರ, ಎಸಿಪಿ ಗಳಾದ ಚಂದ್ರಶೇಖರ್, ಸತೀಶ್, ಆರ್.ಎಫ್.ಓ ಸಂತೋಷ್ ಅವರು ಪುಷ್ಪಾರ್ಚನೆ ಮಾಡಿದರು. ಈಗಾಗಲೇ ಬನ್ನಿಮಂಟಪದವರೆಗೆ ಮರದ ಅಂಬಾರಿ ತಾಲೀಮು ಮಾಡಲಾಗಿದೆ.