ಜನಾರ್ದನ ರೆಡ್ಡಿ ಬಿಜೆಪಿ ಬಂದ್ರೆ ಸ್ವಾಗತ ಮಾಡುತ್ತೇನೆ: ಶ್ರೀ ರಾಮುಲು

ವಿಜಯನಗರ:– ಪ್ರಭು ಶ್ರೀರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ ಎಂಬ ಕಾಂಗ್ರೆಸ್ ನಾಯಕರ ಬಹಿರಂಗ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಶ್ರೀ ರಾಮುಲು ಕೆಂಡಾಮಂಲರಾಗಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಮಂದಿರ ಧ್ವಂಸ ಮಾಡಿದ ಬಾಬರ್ ಸಮಾದಿಗೆ ಕೈ ಮುಗಿಯುತ್ತಾರೆ. ಪ್ರಭು ಶ್ರೀರಾಮ ಚಂದ್ರನ್ನ ವಿರೋಧ ಮಾಡುತ್ತಾರೆ.

ನೆಹರುನಿಂದ ಇಂದಿನ ರಾಹುಲ್ ಗಾಂಧಿವರೆಗೆ ರಾಮನನ್ನ ವಿರೋಧ ಮಾಡ್ತಾ ಬಂದಿದ್ದಾರೆ. ಅಂದು ಸೋಮನಾಥ ದೇಗುಲಕ್ಕೆ ವಿರೋಧ ಮಾಡಿದಂತೆ ರಾಮಂಮದಿರ ಬಹಿಷ್ಕಾರ ಮಾಡ್ತಿದ್ದಾರೆ ಹಿಂದೂ ವಿರೋಧಿ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ ಎಂದರು.

ಇನ್ನೂ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಕರೆತರಲು ತೆರೆಮರೆ ಕಸರತ್ತು ವಿಚಾರವಾಗಿ ಮಾತನಾಡಿ, ಜನಾರ್ದನ ರೆಡ್ಡಿ ಬಿಜೆಪಿ ಬಂದ್ರೆ ಸ್ವಾಗತ ಮಾಡುತ್ತೇನೆ. ರೆಡ್ಡಿ ಬಿಜೆಪಿಗೆ ಬರುತ್ತೇನೆ ಅಂದರೆ ನನ್ನ ಅಭ್ಯಂತರ ಇಲ್ಲ ಎಂದರು.

ಇನ್ನೂ ಶ್ರೀರಾಮುಲುರನ್ನ ಬೆಳೆಸಿದ್ದು ನಾನೇ ಎಂಬ ಜನಾರ್ದನ ರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಜನಾರ್ದನ ರೆಡ್ಡಿ ನನ್ನ ಬೆಳೆಸಿದ್ದಷ್ಟೇ ಅಲ್ಲ. ನನಗೆ, ಅನ್ನ ಕೊಟ್ಟವರು. ನಾನು ಹಾಗೂ ಮೇಲೆ ಜನಾರ್ದನ ರೆಡ್ಡಿ ಅನ್ನದ ಋಣ ಇದೆ ಎಂದು ಸ್ನೇಹಿತ ಜನಾರ್ದನ ರೆಡ್ಡಿ ಕುರಿತು ರಾಮುಲು ಮಾರ್ಮಿಕವಾಗಿ ಹೇಳಿದ್ದಾರೆ.

Loading

Leave a Reply

Your email address will not be published. Required fields are marked *