ಬೆಂಗಳೂರು: ಕಾನೂನುಬದ್ಧವಾಗಿ ಜಾತಿಗಣತಿ ಮಾಡುವಂತೆ ಸೂಚನೆ ನೀಡುತ್ತೇನೆ. ಯಾರೆಲ್ಲ ವಂಚಿತರಾಗಿದ್ದಾರೋ ಅವರಿಗೆಲ್ಲ ನ್ಯಾಯ ದೊರಕಬೇಕು. ನನಗೆ ಎರಡನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ.
5 ಗ್ಯಾರಂಟಿಗಳ ಜೊತೆಗೆ ಬೇರೆ ಭರವಸೆಗಳನ್ನು ಕೂಡ ಕೊಟ್ಟಿದ್ದೇನೆ.
ಗ್ಯಾರಂಟಿ ಬಗ್ಗೆ ರಾಜಕೀಯಕ್ಕಾಗಿ ಕೆಲವರು ಟೀಕೆ ಮಾಡಬಹುದು. 2013ರಲ್ಲಿ 6 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.