ನಾನು ನನ್ನ ಪ್ರಜಾಪ್ರಭುತ್ವ ಜವಾಬ್ದಾರಿ ನಿಭಾಯಿಸಿದ್ದೇನೆ: ಸಂತೋಷ್ ಹೆಗ್ಡೆ

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆ ಪ್ರಯುಕ್ತ ರಾಜಧಾನಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಂತೋಷ್ ಹೆಗಡೆ ಅವರು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ನನ್ನ ಪ್ರಜಾಪ್ರಭುತ್ವ ದ ಜವಾಬ್ದಾರಿ ನಿಭಾಯಿಸಿದ್ದೇನೆ. ಮತ ಹಾಕೋದ್ರಿಂದ ಏನಾಗುತ್ತೆ ಅನ್ನೋ ಭಾವನೆ ಕೆಲವರಲ್ಲಿ ಇದೆ.

 

ಅದು ತಪ್ಪು. ಬಾಷೆ, ಜಾತಿ ಆಧಾರದಲ್ಲಿ ಯಾರೂ ಮತ ಹಾಕಬೇಡಿ. ನಾನು ಮತ ಹಾಕಿದ ಅಭ್ಯರ್ಥಿ ಕೆಲಸ ಮಾಡ್ತಾನಾ ಅಂತ ನೋಡಿ ಮತ ಹಾಕಿ. ಅಂತಹ ಅಭ್ಯರ್ಥಿ ಕಾಣದೇ ಇದ್ರೆ ನೋಟಾಗಾದ್ರೂ ಮತ ಹಾಕಿ. ಯುವಕರು ಚುನಾವಣೆಯ ಅಗತ್ಯ ಅರಿತು ಮತದಾನ ಮಾಡಿ ಎಂದು ಸಂತೋಷ್ ಹೆಗಡೆ ಅವರು ಮನವಿ ಮಾಡಿದ್ದಾರೆ. ಇನ್ನೂ 2023 ರ ವಿಧಾನಸಭಾ ಚುನಾವಣೆ ಇಂದು ನಡೆಯುತ್ತಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Loading

Leave a Reply

Your email address will not be published. Required fields are marked *