ಚಾಮರಾಜನಗರ: ಮಾಜಿ ಸಚಿವ ಎನ್. ಮಹೇಶ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನವರು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಿ ತಾವು ಮಾಡಿರುವ ಭರವಸೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ತಾವು ಮಾಡಬೇಕಾದ ಕೆಲಸವನ್ನು ಕೇಂದ್ರ ಸರ್ಕಾರದ ಮೇಲೆ ಹೊರೆಸುತ್ತಿದ್ದಾರೆ. ಕಾಂಗ್ರೆಸ್ ಲೋಗೋ ಬಚ್ಚಾ ಹೈ ಎನ್ನುವಂತಾಗಿದೆ ಇವರ ಪರಿಸ್ಥಿತಿ. ಕಾಂಗ್ರೆಸ್ನವರದ್ದು ಮಕ್ಕಳಾಟ ಎನಿಸುತ್ತಿದೆ. 10 ವರ್ಷದಿಂದ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆ ಅಡಿ 5 ಕೆ.ಜಿ. ಅಕ್ಕಿಯನ್ನು ಫ್ರಿಯಾಗಿ ಕೊಡುತ್ತಿದೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ.. ಕೇಂದ್ರ ಅಕ್ಕಿ ಕೊಡುವುದನ್ನ ನಿಲ್ಲಿಸಿದೆ ಅಂತ ಸುಳ್ಳು ಹೇಳಿದರು. 10 ಕೆ.ಜಿ. ಕೊಡುತ್ತೇವೆ ಅಂದಾಗ ಕೇಂದ್ರ ಸರ್ಕಾರವನ್ನ ಕೇಳಿದ್ದೀರಾ ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದರು.