ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಅವರು, ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಕೇಂದ್ರೀಯ ಸಂಶೋಧನಾ ಸಂಸ್ಥೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ದಿಬ್ರುಗಢ್ನ ದಿಹಿಂಗ್ ಖಮ್ತಿಘಾಟ್ನಲ್ಲಿ 100 ಹಾಸಿಗೆಗಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸರ್ಬಾನಂದ ಸೋನೊವಾಲ್, ಪ್ರಧಾನಿ ನರೇಂದ್ರ ಮೋದಿಜಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಆಯುಷ್ ಆಂದೋಲನವು ಜಾಗತಿಕ ಸ್ವಾಸ್ಥ್ಯ ಆಂದೋಲನದ ಪ್ರವರ್ತಕ ಶಕ್ತಿಯಾಗಿ ಮಾರ್ಪಟ್ಟಿರುವ ಕಾರಣಕ್ಕೆ ಅಗಾಧವಾದ ಉತ್ತೇಜನವನ್ನು ಪಡೆದುಕೊಂಡಿದೆ ಎಂದರು.
ನಾವು ದಿಬ್ರುಗಢದಲ್ಲಿ 100 ಹಾಸಿಗೆಗಳ ಆಸ್ಪತ್ರೆಯೊಂದಿಗೆ ಯೋಗ ಮತ್ತು ಪ್ರಕೃತಿಚಿಕಿತ್ಸೆಯ ಮೊದಲ ರೀತಿಯ ಕೇಂದ್ರೀಯ ಸಂಶೋಧನಾ ಸಂಸ್ಥೆಗೆ ಅಡಿಪಾಯ ಹಾಕಿದ್ದೇವೆ. ಪ್ರಕೃತಿ ತಾಯಿ ತನ್ನ ಅಗಾಧವಾದ ಸೌಂದರ್ಯದಿಂದ ನಮ್ಮನ್ನು ಆಶೀರ್ವದಿಸಿದ್ದಾಳೆ. ಇದು ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದದ ಮೂಲಕ ಪುನರುಜ್ಜೀವನಗೊಂಡ, ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಚಿಕಿತ್ಸಾ ಪದ್ಧತಿಯೊಂದಿಗೆ ದಕ್ಷಿಣ ಏμÁ್ಯದಲ್ಲೇ ರೋಗ ಗುಣಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮತ್ತು ಔಷಧದ ಇತರ ಸಾಂಪ್ರದಾಯಿಕ ರೂಪಗಳು ಎಂದು ಅವರು ಹೇಳಿದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಸಾಂಪ್ರದಾಯಿಕ ಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಪರಿಕರಗಳ ನಡುವೆ ವೈಜ್ಞಾನಿಕ ಮತ್ತು ಉಪಯುಕ್ತವಾದ ಸೇವೆ ತರುವ ಗುರಿಯೊಂದಿಗೆ ಅಂದಾಜು 100 ಕೋಟಿ ರೂ. ಹೂಡಿಕೆಯಲ್ಲಿ ಸಂಸ್ಥೆಯು ಸುಮಾರು 15 ಎಕರೆಗಳ ವಿಸ್ತೀರ್ಣದ ಜಮೀನಿನಲ್ಲಿ ಆಸ್ಪತ್ರೆ ಅಭಿವೃದ್ಧಿಪಡಿಸಲಾಗುವುದು. ಇದು ಈಶಾನ್ಯ ರಾಜ್ಯಗಳಲ್ಲೇ ಮೊದಲೆಯನದ್ದಾಗಿದೆ. ಇದು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಶಿಕ್ಷಣ, ತಡೆಗಟ್ಟುವ ಆರೋಗ್ಯ ಮತ್ತು ಸಂಶೋಧನೆಯಲ್ಲಿ ಹೊಸ ಮಾದರಿ ಆಗಲಿದೆ. ಈ ಅತ್ಯಾಧುನಿಕ ಸಂಸ್ಥೆಯು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಜಾಗತಿಕ ಪ್ರಚಾರ ಮತ್ತು ಸಂಶೋಧನೆಗಾಗಿ ಅಂತಾರಾಷ್ಟ್ರೀಯ ಸಹಯೋಗ ಕೇಂದ್ರವಾಗಿ ಕಾರ್ಯನಿರ್ವಹಿಸುವುದರ ಹೊರತಾಗಿ, ಸಾಕ್ಷ್ಯ ಆಧಾರಿತ ಸಂಶೋಧನೆಯ ಮೂಲಕ ಸಾಂಪ್ರದಾಯಿಕ ಔಷಧ ಮತ್ತು ಅಭ್ಯಾಸಗಳ ಮೂಲಭೂತ ಅಂಶಗಳು ಮತ್ತು ವೈಜ್ಞಾನಿಕ ಮೌಲ್ಯೀಕರಣದ ಮೇಲೆ ಕೇಂದ್ರೀಕರಿಸುತ್ತದೆ. ಸಂಸ್ಥೆಯು ಯೋಗ ಮತ್ತು ಕ್ಷೇಮ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ಗಳಿಗೆ ಉತ್ತೇಜನ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.