ಆಯುರ್ವೇದದಲ್ಲಿ ಕೆಲವಾರು ಔಷಧಿಗಳಲ್ಲಿ ಕಾಳುಮೆಣಸನ್ನು ಬಳಸಲಾಗುತ್ತದೆ. ಕಷಾಯದಲ್ಲಂತೂ ಕಾಳುಮೆಣಸು ಇರಲೇಬೇಕು. ಶೀತ ನೆಗಡಿಗಳಿಗೆ ಕಾಳುಮೆಣಸಿನ ಕಷಾಯ ಅತ್ಯುತ್ತಮ ಔಷಧಿಯಾಗಿದೆ. ಆದರೆ, ಈ ಪುಡಿಯನ್ನು ನಿತ್ಯವೂ ಆಹಾರದೊಂದಿಗೆ ಬೆರೆಸಿ ಅಥವಾ ಬೆರೆಸದೇ ಸೇವಿಸುವ ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಕೆಲವು ಪ್ರಯೋಜನಗಳ ಜೊತೆಗೇ ಅಪಾಯಗಳೂ ಎದುರಾಗಬಹುದು.
ತೂಕ ಇಳಿಕೆಗೆ ಸಹಕರಿಸುತ್ತದೆ.
ಇದು ಖಾರವಾಗಿರುವ ಕಾರಣ ಇದನ್ನು ಸೇವಿಸಿದ ಬಳಿಕ ದೇಹದ ಉಷ್ಣ ಹೆಚ್ಚುತ್ತದೆ. ವಾಸ್ತವದಲ್ಲಿ ಶೀತ ಕಡಿಮೆಯಾಗಲು ದೇಹದ ಉಷ್ಣವೇ ಕಾರಣವಾಗಿದ್ದು ಈ ಬಿಸಿಯಲ್ಲಿ ವೈರಸ್ಸುಗಳು ಸಾಯುತ್ತವೆ. ಇದರ ಜೊತೆಗೇ ಈ ಬಿಸಿಯನ್ನು ಉತ್ಪಾದಿಸಲು ದೇಹ ಕೊಬ್ಬನ್ನು ಬಳಸಿಕೊಳ್ಳುತ್ತದೆ. ತನ್ಮೂಲಕ ತೂಕ ಇಳಿಕೆಯ ಪ್ರಯತ್ನಗಳು ಶೀಘ್ರ ಫಲ ನೀಡತೊಡಗುತ್ತವೆ. ಅಲ್ಲದೇ ವ್ಯಾಯಾಮದ ಸಮಯದಲ್ಲಿ ಜೀವ ರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ನಿತ್ಯವೂ ಮಸಾಲೆಯುಕ್ತ ಆಹಾರಗಳನ್ನು ಸೇವಿಸುವ ವ್ಯಕ್ತಿಗಳಲ್ಲಿ ಹೃದ್ರೋಗದ ಸಾಧ್ಯತೆ ಕಡಿಮೆ ಇರುವುದನ್ನು ಅಧ್ಯಯನಗಳು ತಿಳಿಸಿವೆ. ಈ ತೊಂದರೆಗೆ ಮುಖ್ಯ ಕಾರಣವಾಗಿರುವ ಎಲ್ ಡಿ ಎಲ್ ಎಂಬ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಒಡೆಯುವ ಮೂಲಕ ಕಾಳುಮೆಣಸು ಹೃದಯವನ್ನು ಕಾಪಾಡುತ್ತದೆ.
ಕ್ಯಾನ್ಸರ್ ಜೀವಕೋಶಗಳ ವಿರುದ್ದ ಹೋರಾಡುತ್ತದೆ
ಅಮೇರಿಕಾದ ಕ್ಯಾನ್ಸರ್ ಸಂಶೋಧನಾಲಯದ ಪ್ರಕಾರ ಕಾಳುಮೆಣಸಿನಲ್ಲಿರುವ ಖಾರಕ್ಕೆ ಕಾರಣವಾಗಿರುವ ಕ್ಯಾಪ್ಸೈಸಿನ್ ಎಂಬ ಪೋಷಕಾಂಶಕ್ಕೆ ಕೆಲವು ಬಗೆಯ (ರಕ್ತ ಕ್ಯಾನ್ಸರ್ ಸಹಿತ) ಕ್ಯಾನ್ಸರ್ ಪೀಡಿಅ ಜೀವಕೋಶಾಗಳನ್ನು ಕೊಲ್ಲುವ ಶಕ್ತಿ ಇದೆ.
ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ.
ಕಾಳುಮೆಣಸಿನಲ್ಲಿರುವ ವಿಟಮಿನ್ ಎ ಮತ್ತು ಸಿ ರಕ್ತನಾಳಗಳ ಗೋಡೆಗಳನ್ನು ಬಲಪಡಿಸುತ್ತದೆ ಹಾಗೂ ಒಳಭಾಗದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗಿದ್ದರೆ ಇವನ್ನು ಒಡೆದು ರಕ್ತದ ಹರಿವನ್ನು ಸುಗಮಗೊಳಿಸುವ ಮೂಲಕ ಅಧಿಕ ರಕ್ತದ ಒತ್ತಡವನ್ನು ತಗ್ಗಿಸುತ್ತದೆ.
ಜೀರ್ಣಕ್ರಿಯೆಗೆ ನೆರವಾಗುತ್ತದೆ.
ಕಾಳುಮೆಣಸು ಜೀರ್ಣಾಂಗಗಳಲ್ಲಿ ವಾಯುಪ್ರಕೋಪವನ್ನು ತಡೆಯುವ ಗುಣ ಹೊಂದಿದೆ ಹಾಗೂ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ತನ್ಮೂಲಕ ಸಣ್ಣ ಕರುಳಿನಲ್ಲಿ ಆಹಾರ ಸುಲಭವಾಗಿ ಜೀರ್ಣಗೊಂಡು ಪೋಷಕಾಂಶಗಳು ಹೀರಲ್ಪಡುತ್ತವೆ.
ಸಾಮಾನ್ಯ ಶೀತದ ವಿರುದ್ದ ಹೋರಾಡುತ್ತದೆ
ಇದರಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ ಹಾಗೂ ಪ್ರತಿಜೀವಕವಾಗಿದ್ದು ಆಹಾರದ ಜೊತೆಗೆ ಸೇವಿಸಿದಾಗ ಸಾಮಾನ್ಯ ಶೀತ ಹಾಗೂ ಮೂಗು ಕಟ್ಟಿಕೊಳ್ಳುವಿಕೆ ಮೊದಲಾದ ತೊಂದರೆಗಳು ಎದುರಾಗದಂತೆ ಕಾಪಾಡುತ್ತದೆ.
ಮೆದುಳಿನ ಕ್ಶಮತೆ ಹೆಚ್ಚಿಸುತ್ತದೆ
ಕಾಳುಮೆಣಸಿನಲ್ಲಿರುವ ಪೈಪರೀನ್ ಎಂಬ ಪೋಷಕಾಂಶ ಮೆದುಳಿಗೆ ಮುದನೀಡುವ ಸೆರೋಟೋನಿನ್ ಎಂಬ ರಸದೂತವನ್ನು ಒಡೆಯುವ ಕಿಣ್ವಗಳನ್ನು ಪ್ರಚೋದಿಸುತ್ತದೆ. ಭಾರತದಲ್ಲಿಯೇ ನಡೆದ ಸಂಶೋಧನೆಯ ಪ್ರಕಾರ ಪೈಪರಿನ್ ಮೆದುಳಿನ ನರಗಳಲ್ಲಿ ಸಂಗ್ರಹಗೊಳ್ಳುವ ಅಮೈಲಾಯ್ಡಲ್ ಪ್ಲಾಕ್ ಎಂಬ ಜಿಡ್ಡನ್ನು ನಿವಾರಿಸುವ ಮೂಲಕ ಮರೆಗುಳಿತನ ಅಥವಾ ಆಲ್ಜೀಮರ್ಸ್ ಕಾಯಿಲೆಯಿಂದಲೂ ರಕ್ಷಣೆ ಒದಗಿಸುತ್ತದೆ.
ಪುರುಷರ ಫಲವತ್ತತೆ ಹೆಚ್ಚಿಸುತ್ತದೆ
ಕಾಳುಮೆಣಸಿನ ಸೇವನೆಯಿಂದ ಪುರುಷರಲ್ಲಿ ಟೆಸ್ಟೋಸ್ಟೆರೋನ್ ಎಂಬ ರಸದೂತದ ಮಟ್ಟ ಹೆಚುತ್ತದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ಸತು ಮತ್ತು ಮೆಗ್ನೀಶಿಯಂ ಇದಕ್ಕೆ ಕಾರಣವಾಗಿದೆ. ಜೊತೆಗೇ ವೀರ್ಯಾಣುಗಳ ಸಂಖ್ಯೆ ಹೆಚ್ಚಳವಾಗಲೂ ಸಹಕರಿಸುತ್ತವೆ.
ಮಧುಮೇಹದ ವಿರುದ್ದ ಹೋರಾಡುತ್ತದೆ
ಕಾಳುಮೆಣಸಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ಸಮತೋಲನದಲ್ಲಿರಿಸುವ ಮೂಲಕ ರಕ್ತದಲ್ಲಿ ಅಪಾರ ಸಕ್ಕರೆ ಇರುವ ಹೈಪರ್ ಗ್ಲೈಸೀಮಿಯಾ ಎಂಬ ಸ್ಥಿತಿಯಿಂದ ರಕ್ಷಿಸುತ್ತವೆ. ಭಾರತದಲ್ಲಿ ನಡೆದ ಸಂಶೋಧನೆಯಲ್ಲಿ ಕಾಳುಮೆಣಸು ಪಿಷ್ಟವನ್ನು ಗ್ಲೂಕೋಸ್ ಆಗಿ ಒಡೆಯುವ ಕಿಣ್ವಗಳನ್ನು ಹಾಗೆ ಮಾಡಲು ಬಿಡದೇ ಈ ಸ್ಥಿತಿಯಿಂದ ರಕ್ಷಿಸುವುದನ್ನು ಗಮನಿಸಲಾಗಿದೆ. ಒಂದು ವೇಳೆ ಹೀಗಾದರೆ ಮಧುಮೇಹದ ಲಕ್ಷಣಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ.
ತ್ವಚೆಯ ಸೆಳೆತ ಹೆಚ್ಚಿಸುತ್ತದೆ.
ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ತ್ವಚೆಯ ಸೆಳೆತ ಹೆಚ್ಚಿಸಿ ನೆರಿಗೆ ಮತ್ತು ಸೂಕ್ಷ್ಮಗೆರೆಗಳು ಮೂಡದಂತೆ ತಡೆಯುತ್ತವೆ. ಜೊತೆಗೇ ರಕ್ತಪರಿಚಲನೆಯನ್ನುಉತ್ತಮಗೊಳಿಸುವ ಮೂಲಕ ಚರ್ಮದ ಅಡಿಯಿಂದ ಪೋಷಣೆ ಒದಗಿಸುತ್ತದೆ.
ಮಲಬದ್ದತೆ ತಗ್ಗಿಸುತ್ತದೆ
ಕಾಳುಮೆಣಸು ವಾಯುಪ್ರಕೋಪವನ್ನು ನಿವಾರಿಸುವ ಗುಣ ಹೊಂದಿರುವ ಕಾರಣದಿಂದ ಮಲಬದ್ದತೆ ಎದುರಾಗದಂತೆ ಪರೋಕ್ಷವಾಗಿ ನೆರವಾಗುತ್ತದೆ. ನಿತ್ಯದ ಮಿತ ಪ್ರಮಾಣದ ಸೇವನೆಯಿಂದ ಜೀರ್ಣಂಗಗಳಲ್ಲಿ ಎದುರಾಗುವ ಬ್ಯಾಕ್ಟೀರಿಯಾಗಳ ಸೋಂಕು, ಅತಿಸಾರ, ಮಲಬದ್ದತೆ ಮೊದಲಾದವು ಎದುರಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಖಿನ್ನತೆ ಕಡಿಮೆಗೊಳಿಸುತ್ತದೆ
ಅಧ್ಯಯನಗಳ ಪ್ರಕಾರ, ಅಲ್ಪ ಪ್ರಮಾಣದ ಪೈಪರಿನ್ (ಸೆರೋಟೋನಿನ್ ನಂತಹ) ನರವಾಹಕ ಅಥವಾ ನ್ಯೂರೋಟ್ರಾನ್ಸ್ಮಿಟರುಗಳ ಮೇಲೆ ಪರಿಣಾಮ ಬೀರುವ ಮೂಲಕ ಇವುಗಳ ದಕ್ಷತೆಯನ್ನು ಹೆಚ್ಚಿಸುತ್ತದೆ ಹಾಗೂ ಮೆದುಳಿಗೆ ಸಂಬಂಧಿಸಿದ ತೊಂದರೆಗಳಾದ ಖಿನ್ನತೆ, ಉದ್ವೇಗ, ಮಾನಸಿಕ ಒತ್ತಡ ಮೊದಲಾದವುಗಳನ್ನು ಕಡಿಮೆಗೊಳಿಸುತ್ತದೆ.