ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ದರ್ಶನ್

ರ್ಶನ್ 47 ನೇ ಹುಟ್ಟು ಹಬ್ಬವನ್ನು ಇದೇ ಫೆಬ್ರವರಿ 16 ಕ್ಕೆ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಯಾರು ಸಹ ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಈ ಹಿಂದೆ ದರ್ಶನ್ ತಮ್ಮ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಕೇಕ್ ತರಬೇಡಿ ಎಂದು ತಿಳಿಸಿದ್ದರು. ಇದೇ ದುಡ್ಡನ್ನ ಅನಾಥಾಶ್ರಮ ನೀಡಿ ಎಂದು ದರ್ಶನ್ ಹೇಳುತ್ತಿದ್ದರು. ‌ದರ್ಶನ್ ಜನ್ಮದಿನ ಅದ್ಧೂರಿಯಾಗಿ ಆಚರಿಸಬಾರದು ಎಂದು ಕೇಳಿಕೊಂಡಿದ್ದಾರೆ. ದರ್ಶನ್ ಜನ್ಮದಿನದ ಸಂಭ್ರಮದಲ್ಲಿ ಎಲ್ಲೆಡೆ ಬ್ಯಾನರ್, ಪ್ಲೆಕ್ಸ್‌ ಹಾಕಬೇಡಿ ಎಂದು ಕೇಳಿಕೊಂಡಿದ್ದಾರೆ.

ಯಶ್‌ ಜನ್ಮದಿನದ ಹಿಂದಿನ ದಿನದ ರಾತ್ರಿ ಬ್ಯಾನರ್ ಕಟ್ಟಲು ಹೋಗಿ ಮೂವರು ಫ್ಯಾನ್ಸ್ ಸಾವನ್ನಪ್ಪಿದ್ದರು. ಅಭಿಮಾನಿಗಳ ಸಾವಿಗೆ ಯಶ್ ತಲಾ 5 ಲಕ್ಷ ರೂಪಾಯಿ ಪರಿಹಾರ‌ ನೀಡಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡ ದರ್ಶನ್ ತಮ್ಮ ಮನೆ ಮುಂದಿನ ಬೋರ್ಡ್‌ ನಲ್ಲಿ ಬ್ಯಾನರ್‌, ಫ್ಲೆಕ್ಸ್‌ ಬೇಡವೆಂದು ಕಿಯರ್‌ ಆಗಿ ಬರೆದಿದ್ದಾರೆ.

Loading

Leave a Reply

Your email address will not be published. Required fields are marked *