ಗುತ್ತಿಗೆದಾರರ ಆರೋಪಗಳಿಂದ ಡ್ಯಾಮೇಜ್ ಆಗುತ್ತಿದೆ: ಸಿಎಂ ಬಳಿ ಆತಂಕ ತೋಡಿಕೊಂಡಿರುವ ಸಚಿವರು

ಬೆಂಗಳೂರು: ಪದೇಪದೇ ಕಾಂಗ್ರೆಸ್ ಪಕ್ಷದ ಇಮೇಜ್ ಡ್ಯಾಮೇಜ್ ಆಗುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ಗೆ ಡ್ಯಾಮೇಜ್ ಮಾಡುತ್ತಿವೆ. ಸರ್ಕಾರದ ಇಮೇಜ್ಗೆ ತಕ್ಕಂತೆ ಕೆಲಸಗಳು ಆಗುತ್ತಿಲ್ಲ. ಶಾಸಕರ ಬೇಸರ, ಕಮಿಷನ್ ಆರೋಪ, ಗುತ್ತಿಗೆದಾರರ ಆರೋಪಗಳಿಂದ ಡ್ಯಾಮೇಜ್ ಆಗುತ್ತಿದೆ.

ಡ್ಯಾಮೇಜ್ ಸರಿಪಡಿಸುವ ಕೆಲಸ ತಕ್ಷಣ ಮಾಡಬೇಕಿದೆ. ಬಿಜೆಪಿ ಸರಿಯಾದ ವಿಪಕ್ಷ ನಾಯಕನ ನೇಮಕ ಮಾಡಿದರೆ ನಮಗೆ ಇನ್ನಷ್ಟು ಹಿನ್ನಡೆ ಆಗಬಹುದು. ಈಗಲೇ ಎಚ್ಚೆತ್ತುಕೊಂಡು ಇಮೇಜ್ ಹೆಚ್ಚಿಸಿಕೊಳ್ಳುವುದು ಸೂಕ್ತ ಎಂದು ಚರ್ಚೆ ನಡೆಸಿದ್ದಾರೆ. ಈ ವೇಳೆ ಬಿಜೆಪಿಗೆ ಕೌಂಟರ್ ಕೊಡುವಂತೆ ಸಿದ್ದರಾಮಯ್ಯ ಅವರು ಸಚಿವರಿಗೆ ಸೂಚನೆ ನೀಡಿದ್ದಾರೆ.

Loading

Leave a Reply

Your email address will not be published. Required fields are marked *