ಗದಗ ಜಿಲ್ಲೆಯ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಗದಗ ಕ್ಷೇತ್ರದಲ್ಲಿ ಒಂದು ಸ್ಥಾನ ಕಳೆದುಕೊಂಡಿದ್ದೇವೆ. ಗದಗ ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿ ಗೆಲ್ಲಲಿದೆ. ಶಾಸಕ ಎಚ್ಕೆ ಪಾಟೀಲ್ ಐದು ವರ್ಷದ ಕ್ಷೇತ್ರದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಅಂತ ಜನ್ರಿಗೆ ಗೊತ್ತಿದೆ. ಗದಗ ಕ್ಷೇತ್ರದ ಜನರಿಗೆ ಕುಡಿಯಲು ನೀರು ಸಿಗುತ್ತಾ ಇಲ್ಲ. ಆ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಅಂತ ಕಿಡಿ ಕಾರಿದರು. ರಾಜ್ಯದಲ್ಲಿ, ಗದಗನಲ್ಲಿ ಬಿಜೆಪಿ ಪರ ದೊಡ್ಡ ಅಲೆ ಇದೆ. ಗದಗದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಗೆಲ್ತಾರೆ. ಎಚ್ ಕೆ ಪಾಟೀಲ್ರು ತಮ್ಮ ಜೀವನದ ಮೂರನೇ ಸೋಲು ಅನುಭವಿಸ್ತಾರೆ. ಒಮ್ಮೆ ಎಂಎಲ್ಸಿ, ಮತ್ತೊಮ್ಮೆ ಎಂಎಲ್ ಎ ಸ್ಥಾನಕ್ಕೆ ನಿಂತು ಸೋತಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಈ ಬಾರಿ ಬಿಜೆಪಿ ಗೆಲುವು ಶತಸಿದ್ಧಿ ಎಂದು ಜೋಶಿ ಹೇಳಿದರು.