ಬೆಂಗಳೂರು: ಗ್ಯಾರಂಟಿಗಳ ಜಾರಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಬಿಜೆಪಿಯವರು ಸದನದ ಹೊರಗೆ, ಒಳಗೆ ಪ್ರತಿಭಟನೆ ಮಾಡಲಿ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿಯವರಿಗೆ ಶುಭವಾಗಲಿ ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಎರಡೂ ಕಡೆ ಪ್ರತಿಭಟನೆ ಮಾಡೋದು ಒಳ್ಳೆಯದು. ಅವರೇ ನಮ್ಮ ಆಚಾರ ವಿಚಾರವನ್ನ ಪ್ರಚಾರ ಮಾಡುತ್ತಿದ್ದಾರೆ. ಅವರು ಏನೇ ಮಾಡಿದ್ರು, ನಮ್ಮಿಂದ ಲೋಪ ಆಗಲ್ಲ. ನಾವು ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ತೇವೆ ಎಂದಿದ್ದಾರೆ.