ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪ್ರಚಾರ ದಿಢೀರ್ ರದ್ದು

ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪ್ರಚಾರ ನಡೆಸುವುದಕ್ಕೆ ತಯಾರಿ ನಡೆದಿತ್ತು. ಆದ್ರೆ ಈಗ ದಿಢೀರ್ ರದ್ದಾಗಿದೆ. ಆರ್ ಅಶೋಕ್ ಕ್ಷೇತ್ರದ ಅರಳಾಳು ಸಂದ್ರಗೇಟ್, ಚಿಕ್ಕಮುದವಾಡಿ, ಚಿಕ್ಕೇನಹಳ್ಳಿ ವಾಡೇದೊಡ್ಡಿ ಮುಂತಾದೆಡೆ ಪ್ರಚಾರ ಮಾಡಬೇಕಿತ್ತು ಆದ್ರೆ ಪ್ರಚಾರಕ್ಕೆ ಪೊಲೀಸ್ ನಿರಾಕರಣೆ ಹಿನ್ನೆಲೆ ಪ್ರಚಾರ ರದ್ದಾಗಿದೆ. ಇದೇ ಮಾರ್ಗದಲ್ಲಿ ಸಂಸದ ಡಿ.ಕೆ ಸುರೇಶ್ ರಿಂದ ಶಿವಕುಮಾರ್ ಪರವಾಗಿ ಪ್ರಚಾರ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಘರ್ಷಣೆ ನಡೆಯುವ ಸಾಧ್ಯತೆ ಹಿನ್ನೆಲೆ ಪೊಲೀಸರು ಅಶೋಕ್ ಪ್ರಚಾರ ಅನುಮತಿ ನಿರಾಕರಿಸಿದ್ದಾರೆ.

Loading

Leave a Reply

Your email address will not be published. Required fields are marked *