ಬೆಂಗಳೂರು ಬಂದ್ ಹಿನ್ನೆಲೆ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಬೆಂಗಳೂರು : ಬೆಂಗಳೂರು ಬಂದ್ ಹಿನ್ನೆಲೆ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದ ಉಚಿತ ಸಾರಿಗೆ ಸೇವೆಯಿಂದಾಗಿ ಖಾಸಗಿ ವಾಹನಗಳಿಗೆ ಭಾರಿ ಹೊಡೆತ ಉಂಟಾಗಿರುವ ಹಿನ್ನೆಲೆ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ಗೆ ಕರೆ ನೀಡಿದೆ.ಈ ಹಿನ್ನೆಲೆ ನಗರದಾದ್ಯಂತ ಖಾಸಗಿ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಇನ್ನೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಲಾ ಮತ್ತು ಊಬರ್ ಸೇವೆ ಸಂಪೂರ್ಣ ಬಂದ್ ಆದ ಹಿನ್ನೆಲೆ ವಿಮಾನ ನಿಲ್ದಾಣದ ಬಳಿ ಪ್ರಯಾಣಿಕರು ಪರಾದಾಡುತ್ತಿದ್ದಾರೆ. ಪ್ರತಿನಿತ್ಯ ಏರ್ಪೋರ್ಟ್ ನ ಓಲಾ ಮತ್ತು ಊಬರ್ ಪಿಕಪ್ ಪಾಯಿಂಟ್ಸ್ ಗಳಲ್ಲಿ ಗಿಜಿಗುಡುತ್ತಿದ್ದ ಕ್ಯಾಬ್ ಗಳು ಮಧ್ಯರಾತ್ರಿಯಿಂದ ಸಂಚಾರ ಬಂದ್ ಮಾಡಿದ್ದಾರೆ.

Loading

Leave a Reply

Your email address will not be published. Required fields are marked *