ಅಕ್ಕಿ ಬದಲು ಹಣ ಕೊಡಲು ಸಂಪುಟದಲ್ಲಿ ತೀರ್ಮಾನ ವಿಚಾರವಾಗಿ ಮಾತನಾಡಿದ ಸಚಿವ ಕೆಹೆಚ್ ಮುನಿಯಪ್ಪ, ಎಲ್ಲಿವರೆಗೂ ಹೆಚ್ಚುವರಿ ಅಕ್ಕಿ ಸಿಗಲ್ಲವೋ ಅಲ್ಲಿವರೆಗೆ ಹಣ ಕೊಡುತ್ತೇವೆ ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಅಕ್ಕಿ ಬೆಲೆ ಹೆಚ್ಚಿದೆ. FCI ಕೊಡುವ ದರಕ್ಕೆ ಕೇಳುತ್ತಿದ್ದೇವೆ, ಆ ದರಕ್ಕೆ ಅವರು ಕೊಡುತ್ತಿಲ್ಲ. ನಮ್ಮ ದರಕ್ಕೆ ಅಕ್ಕಿ ಸಿಗುತ್ತಿಲ್ಲ, ಅಕ್ಕಿ ಸಿಕ್ಕಿದ ತಕ್ಷಣ ವಿತರಿಸುತ್ತೇವೆ ಎಂದರು.