ದಾವಣಗೆರೆ: ತಾಲೂಕಿನ ಮಲ್ಲಶೆಟ್ಟಿಹಳ್ಳಿಯ ಕ್ರಾಸ್ ಬಳಿ ಹಳೇ ದ್ವೇಷದ ಹಿನ್ನೆಲೆ ಬಡಿಗೆಯಿಂದ ಹೊಡೆದು ಯುವಕನ ಕೊಲೆ ಮಾಡಿದ ಘಟನೆ ನಡೆದಿದೆ. ದಾವಣಗೆರೆಯ ರಾಮನಗರ ನಿವಾಸಿ ನರಸಿಂಹ(26) ಕೊಲೆಯಾದ ವ್ಯಕ್ತಿ. ಹಣಕಾಸು ವಿಚಾರಕ್ಕೆ ಮೃತ ನರಸಿಂಹ ಹಾಗೂ ಇದೇ ರಾಮನಗರದ ನಿವಾಸಿ ಶಿವಯೋಗೀಶ್ ನಡುವೆ ಗಲಾಟೆಯಾಗಿ ಶಿವಯೋಗೀಶ್ ಎಂಬುವವನೇ ಕೊಲೆ ಮಾಡಿ ಆರೋಪ ಕೇಳಿಬಂದಿದೆ.