ಕಾರ್ಯಕರ್ತರ ಅಸಮಾಧಾನ; ವಾರ್ನಿಂಗ್ ಕೊಟ್ಟ ಸಚಿವ ಕೆ.ಎನ್.ರಾಜಣ್ಣ

ಹಾಸನ: ಶಕ್ತಿ ಯೋಜನೆಗೆ ಚಾಲನೆ ಸಂದರ್ಭದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವರ ಎದುರಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಸಚಿವ ಕೆ.ಎನ್. ರಾಜಣ್ಣ ಸಿಡಿಮಿಡಿಗೊಂಡಿದ್ದು, ವೇದಿಕೆಯಿಂದ ಎದ್ದು ನಿಂತು ವಾರ್ನಿಂಗ್ ಕೊಟ್ಟಿದ್ದಾರೆ.

 

ಕೆಲವರು ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಹೊಂದಾಣಿಕೆ ಮಾಡಿಕೊಂಡವರನ್ನು ಕಾರ್ಯಕ್ರಮದ ವೇದಿಕೆಯಿಂದ ಕೆಳಗಿಳಿಸುವಂತೆ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಕೆ.ಎನ್.ರಾಜಣ್ಣ, ನನ್ನ ಹತ್ತಿರ ಇದೆಲ್ಲ ಇಟ್ಟುಕೊಳ್ಳಬೇಡಿ ಇದೆಲ್ಲ, ನಡೆಯಲ್ಲ. ಕಾರ್ಯಕ್ರಮದ ವೇಳೆ ಕಾರ್ಯಕರ್ತರ ಈ ರೀತಿ ವರ್ತನೆ ಸರಿಯಲ್ಲ. ಹೀಗೆ ಮಾಡಿದರೆ ಪಕ್ಷ ಕಟ್ಟಲು ಸಾಧ್ಯವೇ? ಏನೇ ಅಸಮಾಧಾನವಿದ್ದರೂ ನಂತರ ಬಂದು ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.

Loading

Leave a Reply

Your email address will not be published. Required fields are marked *