ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಮಾರುತಿ-800 ಕಾರು

ಆನೇಕಲ್;- ಬೆಂಗಳೂರು-ಚೆನೈ ಹೆದ್ದಾರಿ ರಾಯಕೋಟೆ ಜಂಕ್ಷನ್ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಾರುತಿ-800 ಕಾರು ಹೊತ್ತಿ ಉರಿದಿದೆ.

ತಮಿಳುನಾಡಿನ ರಾಯಕೋಟೆ ಮೇಲ್ಸೇತುವೆ ಜಂಕ್ಷನ್ ಬಳಿ ಕಾರು ಹೊತ್ತಿ ಉರಿದಿದೆ. ಹೊಸೂರಿನ ಅಲಸನಾಥಂ ನಿವಾಸಿ ಮನೋಹರ್ ಬಾಬು ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಅಲಸನಾಥಂನಿಂದ ರಾಯಕೋಟೆ ಜಂಕ್ಷನ್ ಕಡೆಗೆ ಹೋಗುವಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ. ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ಉಂಟಾಗಿತ್ತು.

Loading

Leave a Reply

Your email address will not be published. Required fields are marked *