ಮಡಿಕೇರಿಯಲ್ಲಿ ನೇಣಿಗೆ ಶರಣಾದ ಕೇರಳ ಮೂಲದ ದಂಪತಿ..!

ಡಿಕೇರಿ: ಮಗಳನ್ನು (Daughter) ಉಸಿರುಗಟ್ಟಿಸಿ ಕೊಂದು ತಂದೆ-ತಾಯಿ ನೇಣಿಗೆ ಕೊರಳೊಡ್ಡಿದ ಘಟನೆ ಮಡಿಕೇರಿ (Madiekri) ತಾಲೂಕಿನ ಕಗ್ಗೋಡ್ಲು ಗ್ರಾಮದ ರೆಸಾರ್ಟ್‌ವೊಂದರಲ್ಲಿ (Resort) ನಡೆದಿದೆ. ಮೂಲತಃ ಕೇರಳ (Kerala) ರಾಜ್ಯದ ಕೊಲ್ಲಂ ನಿವಾಸಿ ವಿನೋದ್ ಬಾಬುಸೇನಾನ್ (41), ಪತ್ನಿ ಝುಬಿ ಅಬ್ರಹಾಂ (37) ಹಾಗೂ ಪುತ್ರಿ ಜೋಹನ್ (11) ಮೃತ ದುರ್ದೈವಿಗಳು.

ಶುಕ್ರವಾರ ಸಂಜೆ 6 ಗಂಟೆಗೆ ಕ್ರೇಟಾ ಕಾರ್‌ನಲ್ಲಿ ಮಡಿಕೇರಿ ಸಮೀಪದ ಬಿಳಿಗೇರಿಯ ರೆಸಾರ್ಟ್‌ಗೆ ಆಗಮಿಸಿ ಪ್ರತ್ಯೇಕ ಕಾಟೇಜ್ ಪಡೆದ ಕುಟುಂಬ ಕೆಲ ಹೊತ್ತು ವಿಶ್ರಮಿಸಿ ರೆಸಾರ್ಟ್‌ನಲ್ಲಿ ಕಾಲಕಳೆದಿದ್ದಾರೆ.

ಮೂವರು ರೆಸಾರ್ಟ್‌ಗೆ ಬರುವ ಸಮಯದಲ್ಲಿ ಲವಲವಿಕೆಯಿಂದ ಇದ್ದರು. ರಾತ್ರಿ ಊಟ ಮಾಡಿ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಂದಿಗೆ ಕೇರಂ ಆಡಿದ್ದಾರೆ. ನಂತರ ರಾತ್ರಿ ಕೊಠಡಿ ಸೇರಿದ ಕುಟುಂಬ ಶನಿವಾರ ಬೆಳಗ್ಗೆ 10 ಗಂಟೆಗೆ ಚೆಕ್ ಔಟ್ ಆಗುವುದಾಗಿ ತಿಳಿಸಿದ ಮೇರೆಗೆ ರೂಂ ಬಾಯ್ ಬೆಳಗ್ಗೆ 10 ಗಂಟೆಗೆ ಬಾಗಿಲು ತಟ್ಟಿದ್ದು, ಯಾರು ಪ್ರತಿಕ್ರಿಯೆ ನೀಡಲಿಲ್ಲ.

ಕುಟುಂಬ ಹೊರ ತೆರಳಿರಬಹುದು ಎಂದು ಭಾವಿಸಿ ಅರ್ಧ ಗಂಟೆ ಬಿಟ್ಟು ಮತ್ತೆ ಬಾಗಿಲು ತಟ್ಟಿದ್ದು, ಆಗಲೂ ಯಾರೂ ಪ್ರತಿಕ್ರಿಯಿಸದ ಕಾರಣ ಸಿಬ್ಬಂದಿ ಬೆಳಗ್ಗೆ 11 ಗಂಟೆಗೆ ಕಿಟಕಿಯ ಮೂಲಕ ನೋಡಿದಾಗ ಪತಿ-ಪತ್ನಿ ನೇಣಿಗೆ ಶರಣಾಗಿರುವುದು, ಮಗು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸಿಬ್ಬಂದಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತರ ಕುಟುಂಬಸ್ಥರನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿದ್ದಾರೆ.

ಬಳಿಕ ಬಾಗಿಲು ತೆರೆದು ಕೊಠಡಿಯೊಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. 450 ಕಿ.ಮೀ. ದೂರದ ಕೊಲ್ಲಂನಿಂದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಮೃತ ದಂಪತಿ (Couple) ಕೊಲ್ಲಂ ಸಮೀಪವೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದ್ದು, ಕುಟುಂಬಸ್ಥರ ಆಗಮನದ ಬಳಿಕವಷ್ಟೆ ಸಾವಿನ ಕಾರಣ ಹೊರಬೀಳಬೇಕಾಗಿದೆ. ಘಟನೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading

Leave a Reply

Your email address will not be published. Required fields are marked *