ಹಾಸನ: ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್ ಒಂದು ರೀತಿ ಗೆಲುವಿಗೆ ಹಲವು ಅಪ್ಪಂದಿರು, ಸೋಲಿಗೆ ಒಬ್ಬನೇ ತಂದೆ ಎಂಬಂತಾಗಿದೆ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ. ಎಲ್ಲರೂ ನಾನು ಮಾಡಿದ್ದು, ಚಂದ್ರಯಾನಕ್ಕೆ ಹೊರಟಿದ್ದೆ ಅಂತಾರೆ. ಆದರೆ ಹಗಲು-ರಾತ್ರಿ ದುಡಿದಿದ್ದು ವಿಜ್ಞಾನಿಗಳು-ಡಾ.ಪರಮೇಶ್ವರ್ನಮ್ಮ ವಿಜ್ಞಾನಿಗಳಿಗೆ ವಿಶೇಷವಾದ ಅಭಿನಂದನೆ ಹೇಳಬೇಕು. ಪ್ರಧಾನಿ, ಸಿಎಂ, ನಾವೆಲ್ಲರೂ ಕ್ರೆಡಿಟ್ ತೆಗೆದುಕೊಳ್ಳಬಹುದು. ಆದರೆ ಇದು ಇಡೀ ದೇಶದ ಕ್ರೆಡಿಟ್ ಎಂದರು.