ಮಳೆಯಿಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಕೇವಲ ಶೇ. 68 ರಷ್ಟು ಮಾತ್ರ ಬಿತ್ತನೆಯಾಗಿದೆ. ಆದರೆ ಬಿತ್ತನೆಯಾಗಿರುವ ಆಹಾರೋತ್ಪನ್ನಗಳೂ ಸಹ ನೀರಿಲ್ಲದೆ, ಮಣ್ಣಿನಲ್ಲಿ ತೇವಾಂಶ ಇಲ್ಲದೆ ಒಣಗಿ ಶೇ 30 ರಷ್ಟು ಹಾಳಾಗಿವೆ. ಮೆಕ್ಕೆಜೋಳ, ಜೋಳ, ರಾಗಿ, ತೊಗರಿ, ಅವರೆ , ಹುರುಳಿ ಸೇರಿದಂತೆ, ಶೇಂಗಾ, ಸೂರ್ಯಕಾಂತಿ, ಹರಳು ಬೆಳೆಗಳಿಗೆ ನೀರಿಲ್ಲದೆ ಸಮಸ್ಯೆಯಾಗಿದ್ದು ಮುಂದಿನ ದಿನಗಳಲ್ಲಿ ಬೆಲೆಯೇರಿಕೆ ಆದರೂ ಅಚ್ಚರಿ ಪಡಬೇಕಿಲ್ಲ.