ಬೆಂಗಳೂರು: ಲವ್ ಜಿಹಾದ್ ಆರೋಪದ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ, ಕಾಂಗ್ರೆಸ್ ಬಂದ ಮೇಲೆ ಲವ್ ಜಿಹಾದ್, ಪಾಕಿಸ್ತಾನ ಜಿಂದಾಬಾದ್ ಎನ್ನುವುದಲ್ಲೆ ಹರದಾರಿಯಾಗಿದೆ. ಕಾಂಗ್ರೆಸ್ನವರು ಒಂದು ರೀತಿ ಅನುಮತಿ ಕೊಟ್ಟಿದ್ದಾರೆ, ದೇಶ ವಿರೋಧಿ ಚಟುವಟಿಕೆ ಮಾಡುವ ಪಿಎಫ್ಐ ಕೇಸ್ ಗಳನ್ನು ವಾಪಸ್ ಪಡೆದರು, ಮುಂದೆನು ಅದೇ ರೀತಿ ಆಗುತ್ತದೆ. ಟಿಪ್ಪು ಸಿದ್ದಾಂತ ಇಟ್ಟುಕೊಂಡು ಬಂದವರು ಕಾಂಗ್ರೆಸ್ನವರು. ಬಜೆಟ್ನಲ್ಲಿ ಹಿಂದೂ ಮಠಗಳಿಗೆ ಹಣ ಕೊಟ್ಟಿಲ್ಲ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಹಿಂದೂ ವಿರೋಧಿ ಸರ್ಕಾರವಿದು ಎಂದರು.