ವಿಧಾನ ಪರಿಷತ್: ಆಹಾರ ಭದ್ರತೆ ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ನಡುವೆ ವಾಕ್ಸಮರ ನಡೆಯಿತು. ಕಾಂಗ್ರೆಸ್ ಸದಸ್ಯರ ಆರೋಪಕ್ಕೆ ಬಿಜೆಪಿ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ, ವೈ ನಾರಾಯಣಸ್ವಾಮಿ , ರವಿಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ಬಡವರ ಪರವಾಗಿದ್ದೇವೆ ಎಂದು ಹೇಳಿದ್ದಾರೆ. ಸಭಾಪತಿ ಮನವಿಯು ನಡುವೆಯು ಮಾತು ಮುಂದುವರೆಸಿದ ರವಿಕುಮಾರ್ಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ, ನಿಮ್ಮ ಮಾತು ಆರ್ಎಸ್ಎಸ್ಗೆ ತಲುಪಿದೆ ಕೂತ್ಕೊ ಎಂದರು.