ಉಡುಪಿ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ ಹಾಲಾಡಿ ರಸ್ತೆಯಲ್ಲಿ ನಡೆದಿದೆ. ಮಳೆ ಹಿನ್ನಲೆಯಲ್ಲಿ ರಸ್ತೆ ಪಕ್ಕದಲ್ಲಿದ್ದ ಮರ ರಸ್ತೆಗೆ ಉರುಳಿತ್ತು. ಅದೇ ಮಾರ್ಗವಾಗಿ ತೆರಳುತ್ತಿದ್ದ ಗುರುರಾಜ ಗಂಟಿಹೊಳೆ ಅವರು ಮರ ತೆರವು ಮಾಡಲು ನೆರವಾಗಿದ್ದಾರೆ. ಈ ವೇಳೆ ಚಿಕ್ಕ ಮರವೊಂದು ಉರುಳಿ ಬಿದ್ದಿದ್ದು, ಕೂಡಲೇ ಎಚ್ಚೆತ್ತ ಶಾಸಕರು ಪಕ್ಕಕ್ಕೆ ಓಡಿದ್ದಾರೆ.