ಮದ್ಯದ ಅಮಲಿನಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಮದ್ಯದ ಅಮಲಿನಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯಲ್ಲಿ ವಿಜಯ್ ಕುಮಾರ್ ಅಲಿಯಾಸ್ ವಿಜಿ(45) ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ. ಕೊಲೆ ಆರೋಪಿಗಳಾದ ಗಿರೀಶ್, ಶಂಕರ್ನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿನಗರದ ಬಾರ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಿ,
ಗಿರೀಶ್ನನ್ನು ಪದೇಪದೆ ರೇಗಿಸುತ್ತಿದ್ದ. ಅಂಗವಿಕಲನಾಗಿದ್ದ ಗಿರೀಶ್ಗೆ ಇದು ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ವಿಜಿ ತನಗೆ ಕುಂಟ ಎಂದು ರೇಗಿಸುತ್ತಿದ್ದದ್ದು ಕೋಪ ತರಿಸುತ್ತಿತ್ತು. ಹೀಗಾಗಿ ನಿನ್ನೆ(ಜೂನ್ 21) ರಾತ್ರಿ ಬಾರ್ನಲ್ಲಿ ಗಲಾಟೆ ಶುರುವಾಗಿತ್ತು. ಈ ಗಲಾಟೆ ಬೇರೆ ರೀತಿಯ ತಿರುವು ಪಡೆದುಕೊಂಡಿದ್ದು ವಿಜಿಯನ್ನು ಗಿರೀಶ್ ಹಾಗೂ ಶಂಕರ್ ಸೇರಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಅನ್ನಪೂರ್ಣೇ ಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ನು 2020ರಲ್ಲಿ ಚಾಮುಂಡೇಶ್ವರಿ ಬಾರ್ ನಲ್ಲಿ ಕೆಲಸ ಮಾಡ್ತಿದ್ದ ಮೃತ ವಿಜಯ್ ಕುಮಾರ್, ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಆಗಾಗ ಕುಡಿಯೋಕೆ ಅದೇ ಬಾರ್ಗೆ ಹೋಗ್ತಿದ್ದ. ನಿನ್ನೆ ರಾತ್ರಿ ವಿಜಿ ಕುಡಿಯೋಕೆ ಹೋಗಿದ್ದ ಕೆಲ ಹೊತ್ತಿನ ಬಳಿಕ ಅದೇ ಬಾರ್ ಗೆ ವಿಜಯ್ ಸ್ನೇಹಿತರಾದ ಲೋಕೇಶ್, ಗಿರೀಶ್ ಬಂದಿದ್ದರು. ಬಾರ್ ನಲ್ಲಿ ಬಂದು ವಿಜಯ್ ಬಳಿ ಹಣ ಕೇಳಿದ್ದಾರೆ. ಈ ವೇಳೆ ಹಣ ಇಲ್ಲ ಎಂದಿದ್ದ ವಿಜಯ್ ಜೊತೆ ಮಾತು ಶುರುವಾಗಿ ಜಗಳವಾಗಿದೆ. ನಂತರ ವಿಜಯ್ ನನ್ನ ಕರೆದೊಯ್ದು ತಲೆ ಮೇಲೆ ಹಾಲೋ ಬ್ಲಾಕ್ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದ. ಸದ್ಯ ಬಾರ್ ಕ್ಯಾಶಿಯರ್ ನೀಡಿರೋ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ.

Loading

Leave a Reply

Your email address will not be published. Required fields are marked *