ಬೆಂಗಳೂರು: ಪ್ರೀತಿ ಎಂತಹವರನ್ನು ಬದುಕಿಸುವ ಜೊತೆಗೆ ಹೆಚ್ಚು ಕಮ್ಮಿಯಾದರೇ ಜೀವವನ್ನೇ ತೆಗೆಯುತ್ತದೆ. ಹೌದು ನಾವು ತುಂಬಾ ಪ್ರೀತಿಸುತ್ತಿರುವವರು ಸಡನ್ ನಮ್ಮನ್ನ ಬಿಟ್ಟು ಹೋದರೇ ಆಗುವಂತಹ ನೋವು ಹೇಳತೀರದು. ಅದರಂತೆ ಇಲ್ಲೊಬ್ಬ ಯುವಕ ಪ್ರೇಮ ವೈಫಲ್ಯದಿಂದ ಮಾನಸಿಕವಾಗಿ ನೊಂದು, ಇಂದು(ಜೂ.21) ನಸುಕಿನ ಜಾವ 4 ಗಂಟೆಯ ಸುಮಾರಿಗೆ ಕಮ್ಮನಹಳ್ಳಿಯ ಚರ್ಚ್ನ ಪಾಟ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಒಡೆದು ದಾಂಧಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮ್ಯಾಥ್ಯೂ ಎಂಬಾತನೇ ಕೃತ್ಯ ಎಸಗಿದ ಯುವಕ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿ ಯುವಕನನ್ನ ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾನಸಿಕವಾಗಿ ವರ್ತಿಸುತ್ತಿದ್ದ ಇತನನ್ನ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಹುಚ್ಚನಂತೆ ಹೇಳಿಕೆ ನೀಡಿದ್ದಾನೆ. ಹೌದು ಯಾರು ನೀನು ಎಂದು ಕೇಳಿದಾಗ, ನಾನು ದೇವರು. ನನ್ನ ತಂದೆ ಕೂಡ ದೇವರು ಎಂದಿದ್ದಾನೆ. ಏನು ಕೆಲಸ ಮಾಡುತ್ತಿಯಾ ಎಂದರೇ ‘ದೇವರು ಏನು ಕೆಲಸ ಮಾಡುತ್ತಾನೆ ಎಂದು ತಿರುಗಿ ಪೊಲೀಸರಿಗೆ ಪ್ರಶ್ನಿಸಿದ್ದಾನೆ. ಇನ್ನು ಈ ಕುರಿತು ತಲೆ ಕೆಡಿಸಿಕೊಂಡು ಘಟನಾ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿದ್ದ ವೇಳೆ ಯುವಕನ ತಾಯಿ ಬಂದಿದ್ದು, ಬಳಿಕ ಯುವಕನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.