ನನಗೆ ವಿಶ್ವಾಸವಿದೆ ಈ ಸರ್ಕಾರ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ: ಬಿಎಸ್ ಯಡಿಯೂರಪ್ಪ

ಶಿವಮೊಗ್ಗಕಾಂಗ್ರೆಸ್ ಭರವಸೆ ಈಡೇರಿಸಲ್ಲ, ಸರ್ಕಾರ ಉಳಿಯೋದೂ ಇಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು. ಸಂಸತ್ ಚುನಾವಣೆಗೆ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಸೋಲಿನ ಬಗ್ಗೆ ಧೃತಿಗೆಡುವುದು ಬೇಡ ಬೇರೆ ಬೇರೆ ಕಾರಣಕ್ಕೋಸ್ಕರ ನಮಗೆ ಹಿನ್ನಡೆ ಆಗಿರಬಹುದು. ಆದರೆ ಮತ್ತೊಮ್ಮೆ ನಾವು ಎದ್ದು ನಿಲ್ಲಬೇಕಿದೆ. ಪಕ್ಷವನ್ನ ಬಲಪಡಿಸಬೇಕಾಗಿದೆ.

ಕಾಂಗ್ರೆಸ್ ಕೊಟ್ಟಿರುವ ಸುಳ್ಳು ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರಲೇಬೇಕು ಎಂದು ನಾವು ಅವರಿಗೆ ಒತ್ತಡ ಹೇಳಬೇಕಿದೆ. ಅದರ ಮೂಲಕ ಪಕ್ಷವನ್ನು ಬಲಪಡಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾವು ನೀವೆಲ್ಲ ಸೇರಿ ಮಾಡಬೇಕಿದೆ ಎಂದರು. ನಮಗೆ ಅಧಿಕಾರ ಸಿಗದೇ ಹಿನ್ನಡೆ ಆಗಬಹುದು ಎಂದು ನಾವು ಈ ಚುನಾವಣೆಯಲ್ಲಿ ನಿರೀಕ್ಷೆ ಮಾಡಿರಲಿಲ್ಲ. ಅವರು ಕೊಟ್ಟಿರುವ ಸುಳ್ಳು ಆಶ್ವಾಸನೆಗಳಿಂದ ಜನನಂಬಿ ಮೋಸ ಹೋಗಿರೋದು. ಮುಂಬರುವ ದಿನಗಳಲ್ಲಿ ವಾಸ್ತವ ಸತ್ಯ ಸಂಗತಿ ಜನರಿಗೆ ಮನವರಿಕೆ ಆಗುತ್ತೆ.

ಸರ್ಕಾರ ಬಹಳ ಕಾಲ ಉಳಿಯಲ
‘ ಏಕ್ ದೇಶ್ ಮೇ ಧೋ ಪ್ರಧಾನ್, ಧೋ ವಿಧಾನ್, ಧೋ ನಿಶಾನ್ ನಹೀ ಚಲೇಂಗೇ ಎಂದು ಶಾಮ್ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರದಿಂದ ಹೋರಾಟ ಮಾಡಿದ್ದರು, ವಾಪಸ್ ಬರಲೇ ಇಲ್ಲ! ಅಂತಹ ಮಹಾನ್ ವ್ಯಕ್ತಿ ಕಟ್ಟಿರುವಂತಹ ಈ ಪಕ್ಷ ಬರುವ ದಿನಗಳಲ್ಲಿ ನಮ್ಮ ವಿಶೇಷ ಪರಿಶ್ರಮದಿಂದ ಮೇಲೆ ಏಳಬೇಕಾಗಿದೆ. ಸುಳ್ಳು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಆ ಭರವಸೆಗಳನ್ನು ಈಡೇರಿಸುವಂತಹ ಶಕ್ತಿ ಕಳೆದುಕೊಂಡಿದೆ.

ಇದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಇದ್ದಾಗ, ನಾವು ಅನೇಕ ಜನಪರ ಯೋಜನೆಗಳನ್ನ ತಂದಿದ್ದೆವು. ಭಾಗ್ಯಲಕ್ಷ್ಮಿ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೀಗೆ ಹಲವಾರು ಜನಪರ ಕೆಲಸ ಮಾಡಿದ್ದೆವು. ನನಗೆ ವಿಶ್ವಾಸವಿದೆ ಈ ಸರ್ಕಾರ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಅನೇಕ ಭರವಸೆ ಕೊಟ್ಟಿದೆ. ಅದು ತಾತ್ಕಾಲಿಕ ಎಂದು ಕಾಂಗ್ರೆಸ್‌ ವಿರುದ್ಧ ಬಿಎಸ್‌ವೈ ಹರಿಹಾಯ್ದಿದ್ದಾರೆ.

Loading

Leave a Reply

Your email address will not be published. Required fields are marked *