ಬೆಂಗಳೂರಿನಲ್ಲಿ ರಾಜಕಾಲುವೆ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ನಾವು ಹಲವು ವರ್ಷಗಳಿಂದ ಇಲ್ಲಿ ವಾಸವಿದ್ದೀವಿ. ಆದ್ರೆ ಏಕಾಏಕಿ ಈಗಿನ ಮಾರ್ಕ್ ಮಾಡಿ ತೆರವುಗೊಳಿಸ್ತಿದ್ದಾರೆ. ಇಂದು ಅಧಿಕಾರಿಗಳು ಸಭೆ ಕರೆದಿದ್ದಾರೆ. ಸೋಮವಾರ ಮತ್ತೆ ತೆರವುಗೊಳಿಸೋ ಸೂಚನೆ ನೀಡಿದ್ದಾರೆ. ನಮ್ಮ ಬಳಿಯೂ ದಾಖಲೆಗಳಿವೆ. ಆದ್ರೆ ಈಗ ಹಳೆಯ ದಾಖಲೆ ಪರಿಶೀಲಿಸಿ ತೆರವುಗೊಳ್ತಿದ್ದೀವಿ ಅಂತ ಕಾರಣ ಕೊಡ್ತಿದ್ದಾರೆ ಎಂದು ಸ್ಥಳೀಯರ ಅಳಲು ತೋಡಿಕೊಂಡಿದ್ದಾರೆ.