ಬೆಂಗಳೂರು : ಡಿಕೆಶಿ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಜೊತೆ ಸಚಿವ ಎಂ.ಬಿ. ಪಾಟೀಲ್ ಮಾತನಾಡುತ್ತಿದ್ದರು. ಇದಕ್ಕೆ ಗರಂ ಆದ ಡಿಕೆಶಿ ಡೋಂಟ್ ಡಿಸ್ಟರ್ಬ್ ಎಂದು ಸೂಚನೆ ನೀಡಿದ್ದಾರೆ. ಅದು ಏನೇ ಇರಲಿ ಈಗ ಮಾತನಾಡಬೇಡಿ ಅಂತ ಎಂ.ಬಿ. ಪಾಟೀಲ್ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಈ ವೇಳೆ ಸಿಎಂ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸುಮ್ಮನೆ ಇದ್ದರು.
ನಗರದ ಇಂದಿರಾ ಗಾಂಧಿ ಭವನದಲ್ಲಿ ನಡೆಯುತ್ತಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು. ನಿಮ್ಮ ಗುರಿ ಮುಂದಿನ ಚುನಾವಣೆ, ನೀವು ಸರಿಯಾಗಿ ಕೆಲಸ ಮಾಡಬೇಕು. ನಿಮ್ಮ ಬೂತ್ ಸಿದ್ದಪಡಿಸಿಕೊಳ್ಳಿ ಎಂದರು. ಲೋಸಭಾ ಚುನಾವಣೆಗೂ ಅಸೆಂಬ್ಲಿ ಚುನಾವಣೆಗೂ ವ್ಯತ್ಯಾಸ ಇರುತ್ತೆ ಚುನಾವಣೆಯಲ್ಲಿ ತಿಳಿದುಕೊಳ್ಳಿ ಅಂತ ಕಾರ್ಯಕರ್ತರಿಗೆ ಡಿಕೆಶಿ ಹೇಳಿದ್ದಾರೆ.
ಡಿಕೆಶಿ ಭಾಷಣದ ವೇಳೆ ಡೋಂಟ್ ಡಿಸ್ಟರ್ಬ್ ಎಂದು ಸೂಚನೆ ನೀಡಿದ್ದಾರೆ. ಅದು ಏನೇ ಇರಲಿ ಈಗ ಮಾತನಾಡಬೇಡಿ ಅಂತ ಎಂ.ಬಿ. ಪಾಟೀಲ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸುಮ್ಮನೆ ಇದ್ದರು.ಸಚಿವ ಎಂಬಿ ಪಾಟೀಲ್ ಸಿದ್ದರಾಮಯ್ಯ ಆರೋಗ್ಯ ವಿಚಾರಿಸುತ್ತಿದ್ದರು. ಕೈ ಹುಷಾರಾಯಿತಾ ಎಂದು ಸಿದ್ದು ಕುಶಲೋಪರಿ ವಿಚಾರಿಸುತ್ತಿದ್ದರು. ಈ ವೇಳೆ ಗರಂ ಆದ ಡಿಕೆಶಿ ಡೋಂಟ್ ಡಿಸ್ಟರ್ಬ್ ಎಂದು ಸೂಚನೆ ನೀಡಿದ್ದಾರೆ