ನಟ ದರ್ಶನ್ ಅವರು ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇದಾರೆ, ಇರ್ತಾರೆ: ಸುಮಲತಾ ಅಂಬರೀಶ್!

ಬೆಂಗಳೂರು : ನಟ ದರ್ಶನ್ ಅವರು ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇದಾರೆ, ಇರ್ತಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಕೂಡ ಸಭೆಯಲ್ಲಿ ಮಾತನಾಡಿದ್ದಾರೆ. ಅವರು ಕೂಡ ನಮ್ಮ ಜೊತೆ ಇದ್ದು ದುಡಿದಿದ್ದವರು.ಎಲ್ಲರೂ ಜೊತೆಗೆ ಹೋಗೋಣ ಎಂದು ದರ್ಶನ್ ಹೇಳಿದ್ದಾರೆ ಎಂದು ತಿಳಿಸಿದರು.‌

ಸಚ್ಚಿದಾನಂದ ಸಂಧಾನ ವಿಚಾರ ಚರ್ಚೆ ಆಗುತ್ತಿರುವ ಬಗ್ಗೆ ಗೊತ್ತಿಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ. ಬೇರೆ ಆಗಿದ್ದೇವೆ ಅಂತ ಸಚ್ಚಿದಾನಂದ ಅವರೂ ಹೇಳಿಲ್ಲ, ನಾನು ಹೇಳಿಲ್ಲ. ಈ ಬಗ್ಗೆ ಗೊಂದಲ ಬೇಡ. ಅವರು ನಮ್ಮ ಜೊತೆಯಲ್ಲೇ ಇದಾರೆ ಎಂದು ಹೇಳಿದರು.

ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾಗುತ್ತದೆ ಎಂಬ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಅವರು ಮಂಡ್ಯ ಬಗ್ಗೆ ಮಾತ್ರ ಯೋಚನೆ ಮಾಡುತ್ತಿಲ್ಲ. ರಾಜ್ಯದ ಬಗ್ಗೆ ಆಲೋಚನೆ ಮಾಡುತ್ತಾರೆ. ನಾನು ಮಂಡ್ಯ ಬಗ್ಗೆ ಮಾತ್ರ ಆಲೋಚನೆ ಮಾಡುತ್ತೇನೆ. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ತಯಾರಿಯ ಮೊದಲ ಸಭೆ ಇದು. ಇಲ್ಲಿಂದಲೇ ತಯಾರಿ ಮಾಡುತ್ತೇವೆ ಎಂದು ಸುಮಲತಾ ಅಂಬರೀಶ್ ಹೇಳಿದರು.

Loading

Leave a Reply

Your email address will not be published. Required fields are marked *