ಹಾಸ್ಟೆಲ್ʼನಲ್ಲಿ ಅಡುಗೆ ಸರಿಯಾಗಿಲ್ಲ ಅಂತಾ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ.!

ಬಳ್ಳಾರಿ: ಹಾಸ್ಟೆಲ್ ನಲ್ಲಿ ಅಡುಗೆ ಸರಿಯಾಗಿಲ್ಲ ಅಂತಾ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ನಗರದ ನಂ 2 ಎಸ್ಸಿ ಹಾಸ್ಟೆಲ್‌ʼನಲ್ಲಿ ನಡೆದಿದೆ. ಬಿಎ ವಿದ್ಯಾರ್ಥಿ ರವಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ ವಾರ್ಡನ್​​ ದಾವೂದ್​ನನ್ನು ವಜಾಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.

ಹಾಸ್ಟೆಲ್ ಮ್ಯಾನೇಜ್ಮೆಂಟ್ ಸಿಬ್ಬಂದಿ ಬಾಲರಾಮ್ ಮತ್ತು ವಾರ್ಡನ್ ದಾವೂದ್ ಎಂಬವರು ವಿದ್ಯಾರ್ಥಿ ರವಿಯನ್ನು ಎಳೆದಾಡಿ ಶರ್ಟ್ ಹರಿದುಹಾಕಿ ಹಲ್ಲೆ ಮಾಡಿ ರೌಡಿಗಳಂತೆ ವರ್ತಿಸಿದ್ದಾರೆ. ಹಲ್ಲೆ ಮಾಡಿದ್ದ ಬಗ್ಗೆ ಮಾಹಿತಿ ನೀಡಿದಕ್ಕೆ ವಿದ್ಯಾರ್ಥಿ ಮೇಲೆ ಮತ್ತೆ ದೌರ್ಜನ್ಯ ಎಸಗಿರುವ ಆರೋಪವೂ ಕೇಳಿಬಂದಿದೆ.

Loading

Leave a Reply

Your email address will not be published. Required fields are marked *