ಸೂಟ್ ಕೇಸ್ ಬದಲು ಚರ್ಮದ ಬ್ಯಾಗ್ʼನಲ್ಲಿ ಬಜೆಟ್ ಪ್ರತಿ ತಂದ ಸಿದ್ದರಾಮಯ್ಯ

ಬೆಂಗಳೂರು: ಕೆಲವೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲು ಕಾವೇರಿ ನಿವಾಸಕ್ಕೆ ಸಚಿವರು, ಶಾಸಕರು ಆಗಮಿಸುತ್ತಿದ್ದಾರೆ. ಹೊಸ ಸಂಪ್ರದಾಯಕ್ಕೆ ಸಿಎಂ ಸಿದ್ದರಾಮಯ್ಯ ನಾಂದಿ ಹಾಡಿದ್ದಾರೆ. ಹೌದು ಸೂಟ್​ಕೇಸ್​ ಬದಲು ಚರ್ಮದ ಬ್ಯಾಗ್​ನಲ್ಲಿ ಬಜೆಟ್​ ಪ್ರತಿ ತಂದಿದ್ದಾರೆ. ಇನ್ನೂ ಕಾವೇರಿ ನಿವಾಸದಲ್ಲಿ ಅಧಿಕಾರಿಗಳು ಅವರಿಗೆ ಬಜೆಟ್ ಪ್ರತಿ ಹಸ್ತಾಂತರಿಸಿದರು. ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್​​ಗೆ ಅನುಮೋದನೆ ಪಡೆದರು.

Loading

Leave a Reply

Your email address will not be published. Required fields are marked *