ಭಾರೀ ಊಟದ ನಂತರ ಅಸಿಡಿಟಿಯಿಂದಬಳಲುತ್ತಿದ್ದರೆ, ಬಿಸಿಲಿನಿಂದ ಸುಸ್ತಾಗಿ ಮನೆಗೆ ಬಂದಾಗ, ತಂಪು ಪಾನೀಯಗಳ, ಸೋಡಾ ಇತರೆ ಬಾಟಲಿಯನ್ನು ಮೊರೆ ಹೋಗುವ ಬದಲು ಮನೆಯಲ್ಲೇ ಮಜ್ಜಿಗೆ ಸೇವಿಸಿ ನೋಡಿ. ಹೌದು ಮಸಾಲೆ ಮಜ್ಜಿಗೆ, ಮೊಸರು ಕಡಿದು ಬೆಣ್ಣೆ ತಗೆದ ಕಡಿದ ಮಜ್ಜಿಗೆ, ನೀರಾಗಿರುವ ಮಜ್ಜಿಗೆ ಸೇವಿಸಿ ನಂತರ ಅದರ ಚಮತ್ಕಾರವನ್ನು ಅನುಭವಿಸಿ ನೋಡಿ.
ಮೊಸರು ಮತ್ತು ಜೀರಿಗೆ, ಕರಿಬೇವಿನ ಎಲೆಗಳು, ಶುಂಠಿ ಮತ್ತು ಉಪ್ಪು, ಮಜ್ಜಿಗೆ ಮುಂತಾದ ಮಸಾಲೆಗಳಿಂದ ತಯಾರಿಸಿದ ರುಚಿಕರವಾದ, ತಂಪಾದ ಪಾನೀಯವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನೀವು ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮಸಾಲೆಯುಕ್ತಊಟದನಂತರಹೊಟ್ಟೆಯನ್ನುಶಾಂತಗೊಳಿಸಲುಸಹಾಯಮಾಡುತ್ತದೆ:
ತಂಪಾದ, ನೀರಿರುವ ಮೊಸರಿನೊಂದಿಗೆ ಅಂದರೆ ಮಜ್ಜಿಗೆಯೊಂದಿಗೆ ತಯಾರಿಸಲಾಗುತ್ತದೆ. ಈ ಪಾನೀಯವು ಹೊಟ್ಟೆಯ ಉರಿಯನ್ನು ಶಮನಗೊಳಿಸುತ್ತದೆ. ಊಟದ ಮಸಾಲೆಯಿಂದ ಉಂಟಾಗುವ ಕಿರಿಕಿರಿಯಿಂದ ಹೊಟ್ಟೆಯನ್ನು ಶಾಂತಗೊಳಿಸುತ್ತದೆ. ಮೊಸರು, ನೀರು, ಜೀರಿಗೆ, ಮೆಣಸು ಹಾಗೂ ಕರಿಬೇವು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ನಿವಾರಿಸುತ್ತದೆ.
ಕೊಬ್ಬನ್ನುಕರಗಿಸುತ್ತದೆ:
ಹೊಟ್ಟೆ ಭಾರವಾಗುವಷ್ಟು ಊಟ ಸೇವಿಸಿದಾಗ ಕಡಲತೀರದ ತಿಮಿಂಗಿಲದAತೆ ಆಗುತ್ತೇವೆ. ಹೀಗೆ ಹೊಟ್ಟೆ ಭಾರವಾಗುಷ್ಟು ಊಟ ಮಾಡಿದ ನಂತರ ಒಂದು ಸಣ್ಣ ಲೋಟ ನೀರಾಗಿರುವ ಮಜ್ಜಿಗೆಯನ್ನು ಕುಡಿಯಿರಿ. ಏಕೆಂದರೆ ಸಾಮಾನ್ಯವಾಗಿ ಆಹಾರ ಪೈಪ್ಮತ್ತು ಹೊಟ್ಟೆಯ ಒಳಗೆ ಆವರಿಸುವ ಕೊಬ್ಬು, ಎಣ್ಣೆ(Oil) ಅಥವಾ ತುಪ್ಪವನ್ನು ತೊಳೆಯುವಲ್ಲಿ ಮಜ್ಜಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಅಲ್ಲದೆ ಈ ಮಜ್ಜಿಗೆಗೆ ಶುಂಠಿ, ಮೆಣಸು ಮತ್ತು ಇತರೆ ಮಸಾಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆಸಹಕಾರಿ:
ನೀರಾಗಿರುವ ಮಜ್ಜಿಗೆಗೆ ಶುಂಠಿ, ಮೆಣಸು ಮತ್ತು ಜೀರಿಗೆ ಸಂಯೋಜಿಸಿದಾಗ ಅತ್ಯುತ್ತಮ ಜೀರ್ಣಕಾರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಮಸಾಲೆಗಳ ಕಾರ್ಮಿನೇಟಿವ್ ಗುಣಲಕ್ಷಣಗಳು ಮತ್ತು ಹಿತವಾದ ಮಜ್ಜಿಗೆ ಹಾಗೂ ರಿಫ್ರೆಶ್ ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ, ಅಜೀರ್ಣವಾದಾಗ ತ್ವರಿತ ಪರಿಹಾರಕ್ಕಾಗಿ ಒಂದು ಲೋಟ ಮಸಾಲೆ ಮಜ್ಜಿಗೆಯನ್ನು ಕುಡಿಯಿರಿ.
ನಿರ್ಜಲೀಕರಣವಾಗುವುದನ್ನುತಡೆಯುತ್ತದೆ:
ಉಪ್ಪು, ನೀರು, ಮೊಸರು ಮತ್ತು ಮಸಾಲೆಗಳನ್ನು ಬೆರೆಸಿ ರುಚಿಕರವಾದ ಪಾನೀಯವನ್ನು ಮಾಡುತ್ತದೆ. ವಿದ್ಯುದ್ವಿಚ್ಛೇದ್ಯಗಳು ಮತ್ತು ಸಾಕಷ್ಟು ನೀರಿನಿಂದ ತುಂಬಿರುವ ಈ ಮಜ್ಜಿಗೆ ದೇಹವನ್ನು ನಿರ್ಜಲೀಕರಣದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಸೂರ್ಯನ ಅತಿಯಾದ ಶಾಖದಿಂದ ದೇಹ ನಿರ್ಜಲೀಕರಣವಾಗುತ್ತದೆ. ಈ ವೇಳೆ ಒಂದು ಲೋಟ ಮಸಾಲೆ ಮಜ್ಜಿಗೆ ಕುಡಿಯುವುದು ಸಾಮಾನ್ಯವಾಗಿದೆ.
ಕ್ಯಾಲ್ಸಿಯಂಒದಗಿಸುತ್ತದೆ:
ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವವರು ಅಂದರೆ ಹಾಲು ಹೊಂದಲು ಸಾಧ್ಯವಿಲ್ಲದವರು ನೈಸರ್ಗಿಕ ಕ್ಯಾಲ್ಸಿಯಂ ಅನ್ನು ಲೋಡ್ ಮಾಡುವುದನ್ನು ತಪ್ಪಿಸುತ್ತಾರೆ. ಈ ಸಮಯದಲ್ಲಿ ಮಜ್ಜಿಗೆ ಸಹಕಾರಿಯಾಗಿದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಜನರಿಗೆ ಪ್ರತಿಕೂಲವಾಗುವಂತೆ ಮಜ್ಜಿಗೆ ಸಹಾಯ ಮಾಡುತ್ತದೆ. ಆದರೆ ಹಾಲಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಕೊಬ್ಬನ್ನು ಹೊರತುಪಡಿಸಿ ಕ್ಯಾಲ್ಸಿಯಂ ಅನ್ನು ಸರಿಪಡಿಸಲು ಇದು ಪರಿಪೂರ್ಣ ಮಾರ್ಗವಾಗಿದೆ.
ವಿಟಮಿನ್ಕೊರತೆನೀಗಿಸುತ್ತದೆ:
ಮಜ್ಜಿಗೆಯು ಬೆಣ್ಣೆ, ಹಾಲು, ವಿಟಮಿನ್ ಬಿ ಕಾಂಪ್ಲೆಕ್ಸ್, ಪ್ರೋಟೀನ್ಗಳು ಮತ್ತು ಪೊಟ್ಯಾಸಿಯಮ್ನಂತಹ ವಿಟಮಿನ್ಗಳ ಉತ್ತಮ ಮೂಲವಾಗಿದೆ. ವಿಟಮಿನ್ ಬಿ, ವಿಶೇಷವಾಗಿ ರೈಬೋಫ್ಲಾವಿನ್, ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು, ಹಾರ್ಮೋನ್ಗಳ ಸ್ರವಿಸುವಿಕೆ ಮತ್ತು ಜೀರ್ಣಕ್ರಿಯೆಗೆ ಅತ್ಯಗತ್ಯ. ವಿಟಮಿನ್ ಕೊರತೆಯಿಂದಾಗಿ ರೋಗಗಳನ್ನು ಸೋಲಿಸಲು ಮಜ್ಜಿಗೆಯು ಅತ್ಯಗತ್ಯ ವಿಧಾನವಾಗಿದೆ.
ಅಧಿಕರಕ್ತದೊತ್ತಡವನ್ನುಕಡಿಮೆಮಾಡುತ್ತದೆ:
ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಮಜ್ಜಿಗೆಯಲ್ಲಿ ಕಂಡುಬರುವ ಹಾಲಿನ ಕೊಬ್ಬಿನ ಗ್ಲೋಬ್ಯುಲ್ ಮೆಂಬರೇನ್ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ, ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಕ್ಯಾನ್ಸರ್ ಗುಣಲಕ್ಷಣಗಳನ್ನು ಹೊಂದಿರುವ ವಿಶಿಷ್ಟ ಜೈವಿಕ ಸಕ್ರಿಯ ಪ್ರೋಟೀನ್ನಲ್ಲಿ ಸಮೃದ್ಧವಾಗಿದೆ ಎಂದು ತಿಳಿಸಿದೆ. ಅಲ್ಲದೆ ಈ ಅಧ್ಯಯನದಲ್ಲಿ, ವಿಜ್ಞಾನಿಗಳು ಮಜ್ಜಿಗೆಯನ್ನು ಪ್ರತಿದಿನ ಸೇವಿಸಿದ್ದು, ರಕ್ತದೊತ್ತಡ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡುಬAದಿದೆ.
ಆಮ್ಲೀಯತೆನಿವಾರಣೆ:
ನೀರಾಗಿರುವ ಮಜ್ಜಿಗೆಗೆ ಮೆಣಸು ಮತ್ತು ಶುಂಠಿಯAತಹ ಅಗತ್ಯ ಮಸಾಲೆಗಳನ್ನು ಹೊಂದಿದೆ. ಇದು ಆಮ್ಲೀಯತೆಯ ಸಂದರ್ಭದಲ್ಲಿ ನೀವು ಅನುಭವಿಸುವ ಸುಡುವ ಸಂವೇದನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಮಜ್ಜಿಗೆ ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಆಸಿಡ್ ರಿಫ್ಲಕ್ಸ್ನಿಂದಾಗಿ ಹೊಟ್ಟೆಯ ಒಳಪದರದಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದು ನಿಮಗೆ ಅಸ್ವಸ್ಥತೆಯಿಂದ ಪರಿಹಾರವನ್ನು ನೀಡುತ್ತದೆ.