ಬೆಂಗಳೂರಿನಲ್ಲಿ ಪಟಾಕಿ ಅವಘಡ – ಎಷ್ಟು ಮಂದಿ ಕಣ್ಣಿಗೆ ಹಾನಿ ಗೊತ್ತಾ!?

ಬೆಂಗಳೂರು:- ದೀಪದ ಹಬ್ಬ ಹಲವರ ಬಾಳಿಗೆ ರಾಜಧಾನಿ ಬೆಂಗಳೂರಿನಲ್ಲಿ ಕತ್ತಲು ತಂದಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾದ 70 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ನಗರದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು 41 ಕಣ್ಣಿನ ಗಾಯದ ಪ್ರಕರಣಗಳು ವರದಿಯಾಗಿವೆ.

“ಸೋಮವಾರ 11 ಮಂದಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಅದರಲ್ಲಿ ಮೂವರು ಮಕ್ಕಳು. ಇಬ್ಬರು ಹುಡುಗರು ಮತ್ತು ಒಬ್ಬ ಹುಡುಗಿ. ಒಬ್ಬ ಹುಡುಗನ ಎಡಗಣ್ಣಿನಲ್ಲಿ ಇನ್ನೊಬ್ಬನಿಗೆ ಬಲಗಣ್ಣಿನಲ್ಲಿ ಮತ್ತು ಹುಡುಗಿಯ ಎರಡೂ ಕಣ್ಣುಗಳಿಗೆ ಹಾನಿಯಾಗಿದೆ ಎಂದು ಶಂಕರ ಕಣ್ಣಿನ ಆಸ್ಪತ್ರೆ ವೈದ್ಯ ಡಾ ಆನಂದ್ ಬಾಲಸುಬ್ರಮಣ್ಯಂ ಹೇಳಿರುವುದಾಗಿ ಹೇಳಿದೆ.

ನವೆಂಬರ್ 12 ಮತ್ತು 13 ರಂದು ರಾಜ್ಯದ ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು ಒಂಬತ್ತು ಪ್ರಕರಣಗಳು ವರದಿಯಾಗಿವೆ. ನಾರಾಯಣ ನೇತ್ರಾಲಯದಲ್ಲಿ 24 ಪ್ರಕರಣಗಳು ವರದಿಯಾಗಿವೆ.

Loading

Leave a Reply

Your email address will not be published. Required fields are marked *