ಇಂದಲ್ಲಾ ನಾಳೆ ಯುವಕರು ಹೊರ ಹೊಮ್ಮಿ ಸಾಧನೆ ಮಾಡಬೇಕು: ಎಸ್ಎಂ ಕೃಷ್ಣ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರ ಸಂಬಂಧ ಇಂದಲ್ಲಾ ನಾಳೆ ಯುವಕರು ಹೊರ ಹೊಮ್ಮಬೇಕು. ಅವರ ಕೈಗಳನ್ನು ಬಲಪಡಿಸಬೇಕು, ಮಾರ್ಗದರ್ಶನ ನೀಡಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಸಚಿವ ಎಸ್ಎಂ ಕೃಷ್ಣ ತಿಳಿಸಿದರು.

ಹಿರಿಯರಾದ ನಾವು ಸಮನ್ವಯ ಸಾಧಿಸಿಕೊಂಡು ಹೋಗಬೇಕಾಗುತ್ತದೆ. ಇಂದಲ್ಲಾ ನಾಳೆ ಯುವಕರು ಹೊರ ಹೊಮ್ಮಿ ಸಾಧನೆ ಮಾಡಬೇಕು. ಈ ಯುವ ಮುಖಂಡನ ಹೆಗಲಿನ ಮೇಲೆ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ದೊಡ್ಡ ಜವಾಬ್ದಾರಿಗಳನ್ನು ಹೊರೆಸಿದ್ದಾರೆ. ಬಿ.ವೈ.ವಿಜಯೇಂದ್ರನ ಪ್ರತಿಭೆಯನ್ನ ಅವರಲ್ಲರೂ ಗುರುತಿಸಿದ್ದಾರೆ ಎಂದರು.

Loading

Leave a Reply

Your email address will not be published. Required fields are marked *