ಬೆಂಗಳೂರು;- ಖದೀಮರು ಸಂಚಾರ ಸಿಗ್ನಲ್ಗಳ ಬ್ಯಾಟರಿ ಕಳವಾಗಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ. ಕಂಪನಿಯ ಎಂಜಿನಿಯರ್ ಅವರು ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸಿಗ್ನಲ್ಗಳ ಕಾರ್ಯಾಚರಣೆಗಾಗಿ 2 ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಇವುಗಳ ಮೌಲ್ಯ ₹ 12 ಸಾವಿರ. ಅ.13ರಂದು ರಾತ್ರಿ ಆರೋಪಿಗಳು ಬ್ಯಾಟರಿಗಳನ್ನು ಕದ್ದೊಯ್ದಿದ್ದಾರೆ. ಇದರಿಂದ ಸಿಗ್ನಲ್ಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು’ ಎಂದು ತಿಳಿಸಿವೆ.