ಲೋಕಕಲ್ಯಾಣಕ್ಕಾಗಿ ದಾರ್ಶನಿಕರು ‘ಭಾರತ’ವನ್ನು ರಚಿಸಿದ್ದಾರೆ: ಮೋಹನ್ ಭಾಗವತ್

ನವದೆಹಲಿ: ಜನರು ಒಗ್ಗಟ್ಟಿನಿಂದ ಇರಲು ಮತ್ತು ವಿಶ್ವದ ಮುಂದೆ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಲು ಕರೆ ನೀಡಿದ ಆರ್ಎಸ್ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ‘ಭಾರತ’ 5,000 ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ಆರ್ಎಸ್ಎಸ್ನ ಹಿರಿಯ ಪದಾಧಿಕಾರಿ ರಂಗಾ ಹರಿ ಅವರ ‘ಪೃಥ್ವಿ ಸೂಕ್ತ’- ಆನ್ ಓಡ್ ಟು ಮದರ್ ಅರ್ಥ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರವರು.

“ನಾವು ಮಾತೃಭೂಮಿಯನ್ನು ನಮ್ಮ ರಾಷ್ಟ್ರೀಯ ಏಕತೆಯ ಅತ್ಯಗತ್ಯ ಅಂಶವೆಂದು ಪರಿಗಣಿಸುತ್ತೇವೆ. ನಮ್ಮ 5,000 ವರ್ಷಗಳ ಹಿಂದಿನ ಸಂಸ್ಕೃತಿ ಜಾತ್ಯತೀತವಾಗಿದೆ. ಎಲ್ಲಾ ‘ತತ್ವ ಜ್ಞಾನ’ (ಅಂಶಗಳ ಜ್ಞಾನ) ದಲ್ಲಿ ಇದು ತೀರ್ಮಾನವಾಗಿದೆ. ಇಡೀ ಪ್ರಪಂಚವು ಒಂದು ಕುಟುಂಬ, ಇದು ಇದು ನಮ್ಮ ಭಾವನೆ. ಇದು ಸಿದ್ಧಾಂತವಲ್ಲ.ಅದನ್ನು ತಿಳಿದುಕೊಳ್ಳಿ, ಅರಿತುಕೊಳ್ಳಿ ಮತ್ತು ಅದರಂತೆ ನಡೆದುಕೊಳ್ಳಿ ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ.

ದೇಶದಲ್ಲಿ ತುಂಬಾ ವೈವಿಧ್ಯತೆ ಇದೆ. ಪರಸ್ಪರ ಜಗಳವಾಡಬೇಡಿ ಎಂದು ಅವರು ಜನರಿಗೆ ಹೇಳಿದ್ದಾರೆ. ನಾವು ಒಂದೇ ಎಂದು ಜಗತ್ತಿಗೆ ಕಲಿಸಲು ನಿಮ್ಮ ದೇಶವನ್ನು ಸಮರ್ಥವಾಗಿ ಮಾಡಿ. ಇದು ಭಾರತದ ಅಸ್ತಿತ್ವದ ಏಕೈಕ ಉದ್ದೇಶವಾಗಿದೆ ಎಂದು ಹೇಳಿದರು. ಲೋಕಕಲ್ಯಾಣಕ್ಕಾಗಿ ದಾರ್ಶನಿಕರು ‘ಭಾರತ’ವನ್ನು ರಚಿಸಿದ್ದಾರೆ. ಅವರು ತಮ್ಮ ಜ್ಞಾನವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಸಮಾಜವನ್ನು ಸೃಷ್ಟಿಸಿದ್ದಾರೆ ಎಂದರು.

Loading

Leave a Reply

Your email address will not be published. Required fields are marked *