ಭಕ್ತರ ಕಾಣಿಕೆಯಾಗಿ ಘಾಟಿ ಕ್ಷೇತ್ರಕ್ಕೆ ಬಂದ 71 ಲಕ್ಷ

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿ‌ ದೇವಾಲಯದಲ್ಲಿ ಹುಂಡಿ ಕಾಣಿಕೆ ಎಣಿಕೆ ನಡೆದಿದ್ದು, ಒಟ್ಟು 71, 47,234 ರೂಪಾಯಿ ಭಕ್ತರ ಕಾಣಿಕೆ ಸಂಗ್ರಹವಾಗಿದೆ. 4 ಸಾವಿರ‌‌ ಮೌಲ್ಯದ 1 ಗ್ರಾಂ ಚಿನ್ನ, 95,600 ರೂಪಾಯಿ ಮೌಲ್ಯದ 2 ಕೆ.ಜಿ 630 ಗ್ರಾಂ ಬೆಳ್ಳಿ ವಸ್ತುಗಳು ಕಾಣಿಕೆ ರೂಪದಲ್ಲಿ ಸಂಗ್ರಹವಾಗಿವೆ.

ಹುಂಡಿ‌ ಎಣಿಕೆ‌ ಕಾರ್ಯದಲ್ಲಿ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ನಾಗೇಂದ್ರ ಶರ್ಮಾ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸರು ಹಾಗೂ ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು.

Loading

Leave a Reply

Your email address will not be published. Required fields are marked *